ದಾವಣಗೆರೆ
ದಾವಣಗೆರೆ: ಕನ್ನಡ ನಾಡಿನ ಭವ್ಯ ಸಂಸ್ಕೃತಿ, ಪರಂಪರೆಯನ್ನು ಯುವ ಜನತೆಗೆ ಮನನ ಮಾಡಿಕೊಡುವುದು ಇಂದಿನ ಅಗತ್ಯ; ಎಸ್.ಎಸ್.ಮಲ್ಲಿಕಾರ್ಜುನ್
ದಾವಣಗೆರೆ; ಕರ್ನಾಟಕ ನಾಮಕರಣ ಹೊಂದಿ 50 ವರ್ಷಗಳಾಗುತ್ತಿದ್ದು ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ. ನಾಡಿನ ಭವ್ಯ ಇತಿಹಾಸ ಮತ್ತು ಸಂಸ್ಕೃತಿ, ಪರಂಪರೆಯನ್ನು ಯುವ ಜನತೆಗೆ ಮನನ ಮಾಡಿಕೊಡುವುದು ಇಂದಿನ ಅತ್ಯಗತ್ಯ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ೬೮ ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಪಥಸಂಚನದಲ್ಲಿ ಗೌರವ ವಂದನೆ ಸ್ವೀಕರಿಸಿ ತಮ್ಮ ರಾಜ್ಯೋತ್ಸವ ಸಂದೇಶದಲ್ಲಿ ತಿಳಿಸಿದರು.
ಕರ್ನಾಟಕ ರಾಜ್ಯೋತ್ಸವ ಕನ್ನಡಿಗರ ಹಬ್ಬ, ಇದನ್ನು ನಮ್ಮ ನಾಡು, ನುಡಿಯ ಹಿರಿಮೆ ಗರಿಮೆಗಳನ್ನು ಮನನ ಮಾಡಿಕೊಳ್ಳುವ ಪರಿಷೆ ಎಂದರೂ ತಪ್ಪಾಗಲಾರದು. ಇತಿಹಾಸ ಅರಿತವನು ಮಾತ್ರ ಇತಿಹಾಸವನ್ನು ನಿರ್ಮಿಸಲು ಸಾಧ್ಯ ಎಂಬ ಮಾತಿನಂತೆ, ನಮ್ಮ ನಾಡಿನ ಭವ್ಯವಾದ ಇತಿಹಾಸವನ್ನು ಮನನ ಮಾಡಿಕೊಡುವುದು ಈ ಸಂದರ್ಭದಲ್ಲಿ ಬಹು ಮುಖ್ಯವಾಗಿದೆ.
ಕನ್ನಡ ಭಾಷೆ, ಕರ್ನಾಟಕದ ಉಗಮದ ಇತಿಹಾಸದತ್ತ ಕಣ್ಣಾಯಿಸಿದರೆ ಕನ್ನಡಿಗರದು ಸುಮಾರು ಎರಡುವರೆ ಸಾವಿರ ವರ್ಷಗಳ ಭವ್ಯ ಇತಿಹಾಸವಿದೆ. ಕ್ರಿ.ಪೂ.೩ನೇ ಶತಮಾನದ ಸಾಮ್ರಾಟ ಅಶೋಕನ ಶಿಲಾಶಾಸನಗಳಲ್ಲಿ ಕನ್ನಡ ಪದಗಳ ಬಳಕೆಯು ಕಾಣಸಿಗುತ್ತದೆ. ನಂತರ ಶಾತವಾಹನರ ಆಳ್ವಿಕೆಯ ಕಾಲದಲ್ಲಿಯೂ ಕನ್ನಡ ಭಾಷೆಯ ಬಳಕೆಯನ್ನು ಕಾಣಬಹುದು ಎಂದು ಹೇಳಿದರು.
ಕನ್ನಡ ಭಾಷೆ, ಸಂಸ್ಕೃತಿಯ ರಕ್ಷಣೆಗೆ ನೈತಿಕ ಶಕ್ತಿಯನ್ನು ತುಂಬಿ ಕರ್ತವ್ಯ ನಿರ್ವಹಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡಲಾಗಿದೆ. ಒಂದರಿAದ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗವಕಾಶಗಳಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತಂದಿರುವ ರಾಜ್ಯ ನಮ್ಮ ಕರ್ನಾಟಕ ರಾಜ್ಯ ಎಂದು ಹರ್ಷ ವ್ಯಕ್ಯ ಪಡಿಸಿದರು.
ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿಗಳ ಜೊತೆಗೆ ಕರ್ನಾಟಕ ಜಾನಪದ ಅಕಾಡೆಮಿ, ಕರ್ನಾಟಕ ಲಲಿತಕಲಾ ಅಕಾಡೆಮಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕರ್ನಾಟಕ ಬಯಲಾಟ ಅಕಾಡೆಮಿಗಳನ್ನು ಸ್ಥಾಪಿಸಿದೆ. ಮೈಸೂರು, ಧಾರವಾಡ, ಕಲ್ಬುರ್ಗಿ, ಶಿವಮೊಗ್ಗ, ದಾವಣಗೆರೆ ಮತ್ತು ಕಾರ್ಕಳದಲ್ಲಿ ರಂಗಾಯಣಗಳನ್ನು ಸ್ಥಾಪಿಸಿ, ನಾಡಿನ ಎಲ್ಲಾ ಭಾಗದ ಕಲಾವಿದರ ಬೆಳವಣಿಗೆ ಹಾಗೂ ಸಾಹಿತ್ಯ ಸಂಸ್ಕೃತಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು. ಕರ್ನಾಟಕ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್ ಜೊತೆಗೆ ಇನ್ನು ಹಲವಾರು ಕನ್ನಡ ಪರ ಸಂಘ-ಸಂಸ್ಥೆಗಳು ಕನ್ನಡದ ಆಸ್ಮಿತೆಯನ್ನು ಉಳಿಸಿ ಬೆಳಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿವೆ. ಸುವರ್ಣ ಕರ್ನಾಟಕ ಸಂಭ್ರಮದ ಈ ಸಂದರ್ಭದಲ್ಲಿ ಭವ್ಯವಾದ ಇತಿಹಾಸ, ಪರಂಪರೆ, ಶ್ರೇಷ್ಠ ಸಂಸ್ಕೃತಿ ಹೊಂದಿರುವ ನಾವುಗಳು ನಮ್ಮಗಳ ನಡುವಿನ ಭಿನ್ನತೆಗಳನ್ನು ತೊಡೆದು, ಕೀಳರಿಮೆಯನ್ನು ಬಿಟ್ಟು ಎಲ್ಲರೂ ಒಂದಾಗಿ ಭವ್ಯ ಕರ್ನಾಟಕದ ನಿರ್ಮಾಣಕ್ಕೆ ಶ್ರಮಿಸೋಣ. ಆ ಮೂಲಕ ನಾಡಿನ ಅಪೂರ್ವ ಸಂಸ್ಕೃತಿ, ಭವ್ಯ ಪರಂಪರೆಯನ್ನು ಎತ್ತಿ ಹಿಡಿಯೋಣ. ಅದರ ಉಜ್ವಲ ಬೆಳಕಿನಲ್ಲಿ ರಾಜ್ಯದ ಭವ್ಯ ಭವಿಷ್ಯವನ್ನು ರೂಪಿಸಲು ಎಲ್ಲರೂ ಕಂಕಣಬದ್ದರಾಗೋಣ ಎಂದು ಕರೆ ನೀಡಿದರು
ಸಮಾರಂಭದಲ್ಲಿ ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ, ಪಾಲಿಕೆ ಮೇಯರ್ ಬಿ.ಹೆಚ್.ವಿನಾಯಕ ಪೈಲ್ವಾನ್, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಪೂರ್ವ ವಲಯದ ಪೊಲೀಸ್ ಮಹಾನಿರೀಕ್ಷಕ ಕೆ.ತ್ಯಾಗರಾಜನ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ್ ಉಪಸ್ಥಿತರಿದ್ದರು.
ಆಕರ್ಷಕ ಪಥ ಸಂಚಲನ: ಒಟ್ಟು 14 ವಿವಿಧ ತುಕಡಿಗಳು ಶಿಸ್ತಿನ ಮತ್ತು ಆಕರ್ಷಕ ಪಥಸಂಚಲನದಲ್ಲಿ ಪಾಲ್ಗೊಂಡವು. ಮಹೇಶ್ ಪಾಟೀಲ್ ನೇತೃತ್ವದ ಜಿಲ್ಲಾ ಸಶಸ್ತç ಮೀಸಲು ಪಡೆ, ಸಾಗರ್ ನಾಗರಿಕ ಪೊಲೀಸ್ ತಂಡ, ಅಂಬರೀಶ ಕಿರುವಾಡಿ ಗೃಹರಕ್ಷಕದಳ, ವೆಂಕಟೇಶ್ಎಸ್.ಹೆಚ್ ಜಿಲ್ಲಾ ಅಗ್ನಿ ಶಾಮಕ ದಳ, ಅಂಜಿನಪ್ಪ ಹೆಚ್.ಎಸ್ ಅರಣ್ಯ ರಕ್ಷಕದಳ, ಡಿಆರ್ಎಂ ಕಾಲೇಜು ಎನ್.ಸಿ.ಸಿ. ಷರ್ನಿಲ್ ಡಿ.ಕೆ, ಜಿಎಫ್ಜಿಸಿ ಎನ್.ಸಿ.ಸಿ ಶಿವಕುಮಾರ್, ಎವಿಕೆ ಎನ್.ಸಿ.ಸಿ ಚಂಪಕ.ಕೆ, ಸೆಂಟ್ ಪೌಲ್ಸ್ ಸೆಂಟ್ರಲ್ ಸ್ಕೂಲ್ ಎನ್.ಸಿ.ಸಿ ಗೌತಮಿ, ಭಾರರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರೇರಣಾ ಎಂ.ಎಸ್, ಸೀತಮ್ಮ ಸ್ಕೂಲ್ ರೆಹನಾಜಿಯಾ, ಸರ್ಟಿಫೈಡ್ ಸ್ಕೂಲ್ ಮನೀಶ್ ಪಿ, ಪುಷ್ಪಾ ಮಹಾಲಿಂಗಪ್ಪ ಸ್ಕೂಲ್ ಖುಷಿ ಬಿ.ಎಸ್, ಸೇವಾದಳ ಬಿಂದು ಆರ್ ಮತ್ತು ಡಿಎಆರ್ನ ಬ್ಯಾಂಡ್ ಮಾಸ್ಟರ್ ಹೊನ್ನೂರಪ್ಪ ವಾದ್ಯ ತಂಡ ಭಾಗವಹಿಸಿದ್ದವು.
ಸಾಧಕರಿಗೆ ಸನ್ಮಾನ ಕಾರ್ಯಕ್ರಮ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಆಯ್ಕೆ ಮಾಡಿದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 50 ಗಣ್ಯರನ್ನು ಇದೇ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಎಲೆಬೇತೂರಿನ ಕೃಷ್ಣಪ್ಪ ಮಂಗಳವಾದ್ಯ, ಶಾಮನೂರಿನ ಬಸವರಾಜಪ್ಪ ಚಲವಾದಿ ಶಹನಾಯಿ, ಬಾತಿಯ ಕೆ ರೇವಣಪ್ಪ ಜಾನಪದ ಭಜನೆ, ದಾವಣಗೆರೆ ತಾಲ್ಲೂಕಿನ ಜಿ.ಮಂಜಮ್ಮ ರಂಗಭೂಮಿ, ಹರಿಹರ ತಾಲ್ಲೂಕಿನ ಹೆಚ್.ಕೆ ಕೊಟ್ರಪ್ಪ ಸಾಹಿತ್ಯ, ಮಾಯಕೊಂಡ ಹೋಬಳಿಯ ಹೆದ್ನೆ ಗ್ರಾಮದ ಮುರುಗೇಶಪ್ಪ ತೋಟಗಾರಿಕೆ, ಜಗಳೂರು ತಾಲ್ಲೂಕಿನ ಬಿಳಿಚೋಡು ಗ್ರಾಮದ ಕೆ ಬಸವರಾಜಪ್ಪ ಬಿನ್ ಕೊಟ್ರಪ್ಪ ಜಾನಪದ ಭಜನೆ, ದಾವಣಗೆರೆಯ ಹನುಮಂತ ರಾವ್ ಪವಾರ್ ರಂಗಭೂಮಿ, ಚನ್ನಗಿರಿ ತಾಲ್ಲೂಕಿನ ದೇವಪ್ಪ ಮಲಹಾಳ ತತ್ವಪದ ಜಾನಪದ ಸಂಗೀತ, ಹಳೆಬೀಡು ರಾಮಪ್ರಸಾದ್ ದಾವಣಗೆರೆ ಕನ್ನಡಪರ ಹೋರಾಟ, ದಾವಣಗೆರೆ ವಿಜಯ ಸಿ ಅಕ್ಕಿ ಸಮಾಜ ಸೇವೆ, ಹೊನ್ನಾಳಿ ತಾಲ್ಲೂಕಿನ ಬಿ.ಪರಮೇಶ್ವರಚಾರ್ ಸಂಗೀತ, ದಾವಣಗೆರೆಯ ಬಾಪೂಜಿ ಆಸ್ಪತ್ರೆಯ ಡಾ.ಶಿವನಗೌಡ ಸಾಹಿತ್ಯ, ಜಗಳೂರಿನ ಪಾಪಮ್ಮ ಸೋಬಾನೆ, ದಾವಣಗೆರೆ ಎಲ್ಲಮ್ಮ ನಗರದ ವಿಜಯಲಕ್ಷ್ಮಿ ರಂಗಭೂಮಿ, ಜಗಳೂರಿನ ಡಾ. ಬಿ.ಎ ರಾಜಪ್ಪ ನಿಬಗೂರು ಸಾಹಿತ್ಯ, ಹರಿಹರದ ಎಂ. ಬಿ ನಾಗರಾಜ್ ನಾಟಕ ಜಾನಪದ ರಂಗ ಕಲಾವಿದ, ದಾವಣಗೆರೆಯ ರವೀಂದ್ರ ಕಮ್ಮಾರ್ ಚಿತ್ರಕಲೆ, ನಗರದ ಶ್ರೀ ವೀರೇಶ್ವರ ಪುಣ್ಯಶ್ರಮದ ಕಾರ್ಯದರ್ಶಿ ಜೆ.ಎನ್ ಕರಿಬಸಪ್ಪಗೆ ಸಮಾಜ ಸೇವೆ, ಹೊನ್ನಾಳಿಯ ಶಾಂತಾದೇವಿ ಹಿರೇಕಲ್ಮಠ ಸಂಗೀತ,
ದಾವಣಗೆರೆಯ ವೀಣಾ ಕೃಷ್ಣಮೂರ್ತಿ ಸಾಹಿತ್ಯ, ವಿನೋಬನಗರದ ಎಂ.ರವಿ ಕನ್ನಡ ಪರ ಹೋರಾಟ, ದಾವಣಗೆರೆಯ ಗೀತಾ ಎಸ್.ಪಿ ಯೋಗ, ನಗರದ ಎಂ.ಸಿ.ಸಿ ಬ್ಲಾಕ್ ನಿವಾಸಿಯಾದ ನಿರಂಜನ ಮೂರ್ತಿ ಸಮಾಜ ಸೇವೆ, ಚನ್ನಗಿರಿಯ ವಿರೇಶ್ ಪ್ರಸಾದ್ ವರದಿಗಾರರು, ಮಲ್ಲಾಪುರದ ಚಂದ್ರಪ್ಪ ಓ ರಂಗಭೂಮಿ, ಹರಿಹರದ ಹನುಮಂತಾಚಾರಿ ಜಾನಪದ(ವೀರಗಾಸೆ), ದಾವಣಗೆರೆಯ ಬಿ.ಎಂ ಶಿವಕುಮಾರ್ ಸಂಜೆವಾಣಿ ವರದಿಗಾರರು, ಹೊನ್ನಾಳಿಯ ಬಸವರಾಜ ಹೆಚ್.ಬಿ ಜಾನಪದ ಕೀಲು ಕುದುರೆ, ದಾವಣಗೆರೆ ಚಂದ್ರು ತಬಲಾ ವಾದನ, ಕಾರಿಗನೂರು ತಿಪ್ಪೇಸ್ವಾಮಿ.ಜಿ.ಎಸ್ ಸಾವಯವ ಕೃಷಿ, ದಾವಣಗೆರೆಯ ರಂಗನಾಥ್ ರಾವ್ ಸಂಯುಕ್ತ ಕರ್ನಾಟಕ ಪತ್ರಿಕೆ ಉಪಸಂಪಾದಕರು, ದಾವಣಗೆರೆಯ ಫಕ್ರುದ್ದೀನ್ ದಾವಣಗೆರೆ ಇಮೇಜ್ ಪತ್ರಿಕೆ ಸಂಪಾದಕ, ಹರಿಹರದ ಹನುಮಂತಪ್ಪ ಕೊಕ್ಕನೂರು ತಮಟೆ, ದಾವಣಗೆರೆಯ ಬುಳ್ಳಾಪುರ ಕ್ಯಾಂಪ್ ಸುರೇಶ್ ಚೇಕೂರಿ ಕೃಷಿ ಯಾಂತ್ರೀಕರಣ, ದಾವಣಗೆರೆ ಗಂಗಾಧರ ಬಿ.ಎಲ್ ನಿಟ್ಟೂರ್ ಸಾಹಿತ್ಯ, ಚಿರಡೋಣಿಯ ಸಿ.ಎಂ ನರೇಂದ್ರ ಸಂಗೀತ(ಅಂಧ ಕಲಾವಿದರು), ದಾವಣಗೆರೆಯ ದೀಪಾ ಎನ್ ರಾವ್ಶಾಸ್ತ್ರೀಯ ಸಂಗೀತ, ದಾವಣಗೆರೆ ಆವರಗೆರೆಯ ಕರಿಬಸಪ್ಪ.ಜಿ ಕ್ರೀಡೆ(ಅಂಗವಿಕಲರು), ದಾವಣಗೆರೆಯ ಚಂದ್ರು ಹೆಚ್ ಪತ್ರಿಕಾ ವಿತರಕರ ಕ್ಷೇಮಾಭಿವೃದ್ದಿ ಸಂಘ(ರಿ), ದಾವಣಗೆರೆ ಟಿ.ಕೆ ದಿನೇಶ್ ಬಾಬು ಪತ್ರಿಕಾರಂಗ, ದಾವಣಗೆರೆಯ ಡಾ.ವರದರಾಜ್ ಸುವರ್ಣ ಟಿ.ವಿ ವರದಿಗಾರರು, ದಾವಣಗೆರೆ ರವಿಕುಮಾರ್.ಆರ್. ಕನ್ನಡಪರ ಹೋರಾಟ, ದಾವಣಗೆರೆ ಆವರಗೆರೆಯ ಕೆ ಬಾನಪ್ಪ ನಾಟಕ, ಜಾನಪದ, ರಂಗಕಲಾವಿದರು, ದಾವಣಗೆರೆ ವಸಂತಕುಮಾರ್ ನಗರಮಿಡಿತ ಸಂಪಾದಕರು, ಹರಿಹರದ ಹೆಚ್.ಎನ್ ಪ್ರಕಾಶ್ ವಾರ್ತಾಭಾರತಿ ವರದಿಗಾರರು, ದಾವಣಗೆರೆ ವಿಜಯಕುಮಾರಿ.ಕೆ ಸಮಾಜಸೇವೆ, ದಾವಣಗೆರೆಯ ಕಂದಗಲ್ಲು ಗ್ರಾಮದ ಈಶ್ವರಪ್ಪ ತೋಟಗಾರಿಕೆ, ಚನ್ನಗಿರಿಯ ಅಲ್ಲಮಪ್ರಭುಸ್ವಾಮಿ ಹೆಚ್.ಬಿ ಸಾವಯವ ಕೃಷಿ.
ಕಣ್ಮನ ಸಳೆದ ಸಾಂಸ್ಕೃತಿಕ ನೃತ್ಯ: ನಗರದ ಗೋಲ್ಡಾನ್ ಪಬ್ಲಿಕ್ ಶಾಲೆ, ಬಾಪೂಜಿ ಪಬ್ಲಿಕ್ ಶಾಲೆ ಹಾಗೂ ಸೆಂಟ್ ಜಾನ್ಸ್ ಶಾಲೆಯ ವಿದ್ಯಾರ್ಥಿಗಳು ಕನ್ನಡ ರಾಜ್ಯೋತ್ಸವದ ಕನ್ನಡ ಹಾಡುಗಳಿಗೆ ಹೆಜ್ಜೆಹಾಕಿದರು.ಮೆರವಣಿಗೆ; ಬೆಳಿಗ್ಗೆ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್.ಎಂ.ವಿ ಅವರು, ಕನ್ನಡತಾಯಿ ಭುವನೇಶ್ವರಿ ಮೂರ್ತಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಕಲಾ ತಂಡಗಳೊಂದಿಗೆ ವಿವಿಧ ಸ್ತಬ್ದ ಚಿತ್ರಗಳೊಂದಿಗೆ ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್.ಬಿ ಇಟ್ನಾಳ್ ಉಪಸ್ಥಿತರಿದ್ದರು. ಕಲಾತಂಡಗಳೊಂದಿಗೆ ಜಿಲ್ಲಾ ಕ್ರೀಡಾಂಗಣದವರೆಗೆ ಮೆರವಣಿಗೆ ಸಾಗಿತು.
ಬಹುಮಾನ ಪಡೆದ ತಂಡಗಳು: ಪ್ರಥಮ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ದ್ವಿತೀಯ ಜಿಲ್ಲಾ ಅಗ್ನಿ ಶಾಮಕ ದಳ, ತೃತೀಯ ಅರಣ್ಯ ರಕ್ಷಕದಳ, ಕಾಲೇಜು ಎನ್ ಸಿ ಸಿ ತಂಡದ ವಿಭಾಗದಿಂದ ಸಮವಸ್ತç ಪ್ರಥಮ ಡಿಆರ್ಎಂ, ದ್ವಿತೀಯ ಜಿಎಫ್ಜಿಸಿ ಕಾಲೇಜು, ತೃತೀಯ ಸೆಂಟ್ ಪಾಲ್ಸ್ ಸೆಂಟ್ರಲ್ ಸ್ಕೂಲ್ ಶಾಲಾ ಮತ್ತು ವಿಶೇಷ ತಂಡಗಳ ವಿಭಾಗದಲ್ಲಿ ಪ್ರಥಮ ಸೇವಾದಳ ಡಿಸ್ಟಿçಕ್ ಟ್ರೂಪ್, ದ್ವಿತೀಯ ಪುಪ್ಪಾಮಹಾಲಿಂಗಪ್ಪ ಸ್ಕೂಲ್, ತೃತೀಯ ಸರ್ಟಿಫೈಡ್ ಸ್ಕೂಲ್ ಬಹುಮಾನ ಪಡೆದವು.
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
