Connect with us

Dvgsuddi Kannada | online news portal | Kannada news online

ದಾವಣಗೆರೆ: ನಾಳೆ ಹರಿಹರದಲ್ಲಿ ಅಂಚೆ ಜನಸಂಪರ್ಕ ಅಭಿಯಾನ

IMG 20230925 111020

ದಾವಣಗೆರೆ

ದಾವಣಗೆರೆ: ನಾಳೆ ಹರಿಹರದಲ್ಲಿ ಅಂಚೆ ಜನಸಂಪರ್ಕ ಅಭಿಯಾನ

ದಾವಣಗೆರೆ: ಭಾರತೀಯ ಅಂಚೆ ಇಲಾಖೆಯ ದಾವಣಗೆರೆ ಅಂಚೆ ವಿಭಾಗ, ಹರಿಹರ, ರಾಜರಾಮ ಕಾಲೋನಿ, ಯಂತ್ರಪುರ ಹಾಗೂ ದೊಡ್ಡಬಾಡಿ ಅಂಚೆ ಕಛೇರಿಗಳ‌ ಸಹಭಾಗಿತ್ವದಲ್ಲಿ ನಾಳೆ (ಸೆ‌.26) ಅಂಚೆ ಜನಸಂಪರ್ಕ ಅಭಿಯಾನ ಆಯೋಜಿಸಲಾಗಿದೆ.

ಮಂಗಳವಾರ ಮಧ್ಯಾಹ್ನ 3-00 ಗಂಟೆಗೆ ಹರಿಹರ ಮುಖ್ಯ ಅಂಚೆ ಕಛೇರಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆಯನ್ನು ಅಂಚೆ ಅಧೀಕ್ಷಕ ಚಂದ್ರಶೇಖರ್ , ಹರಿಹರ ಅಂಚೆ ಪಾಲಕ ರಾಮಪ್ಪ ಸಾತ್ಪಾಡಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಹಾಯಕ ಅಂಚೆ ಅಧೀಕ್ಷಕ ಜೆ. ಗುರುಪ್ರಸಾದ್ , ಹರಿಹರ ಡಿ.ಆರ್‌.ಎಂ. ಪದವಿಪೂರ್ವ ಕಾಲೇಜು ಪ್ರಾಚಾರ್ಯ ರಾಜಶೇಖರಯ್ಯ, ಶ್ರೀಮತಿ ಗಿರಿಯಮ್ಮ ಆರ್. ಕಾಂತಪ್ಪ ಶ್ರೇಷ್ಠ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಗುರುಬಸವರಾಜಯ್ಯ ಹೆಚ್.ಎಂ. ಭಾಗವಹಿಸಲಿದ್ದಾರೆ.

ಅಂಚೆ ಕಛೇರಿಯ ಎಲ್ಲಾ ಸೇವೆಗಳು ಒಂದೇ
SB, RD, MSSC and & PLI, RPLI, IPPB ಖಾತೆಗಳ ತೆರೆಯುವಿಕೆ , ಆಧಾರ್ ಸೀಡಿಂಗ್, ಅಪಘಾತ ವಿಮೆ ಪಾಲಿಸಿಗಳು(GAG)ಗಳು ಒಂದೇ ಸೂರಿನಡಿ ದೊರೆಯಲಿದೆ. ಈ ಜನ ಸಂಪರ್ಕ ಅಭಿಯಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಬೇಕೆಂದು ಕೋರಲಾಗಿದೆ.

 

ದಾವಣಗೆರೆ; ಭದ್ರಾ ನಾಲೆ ನೀರಿಗಾಗಿ ಬೆಳ್ಳಗ್ಗೆಯಿಂದಲೇ ಬಂದ್ ಬಿಸಿ ; ಪೊಲೀಸ್ ಬಿಗಿ ಬಂದೋಬಸ್ತ್

ರಾಜ್ಯದಲ್ಲಿ ಮುಂದಿನ ಮೂರ್ನಾಲ್ಕು ದಿನ ಉತ್ತಮ ಮಳೆ ಮುನ್ಸೂಚನೆ

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top