ದಾವಣಗೆರೆ: ಭಾರತೀಯ ಅಂಚೆ ಇಲಾಖೆಯ ದಾವಣಗೆರೆ ಅಂಚೆ ವಿಭಾಗ, ಹರಿಹರ, ರಾಜರಾಮ ಕಾಲೋನಿ, ಯಂತ್ರಪುರ ಹಾಗೂ ದೊಡ್ಡಬಾಡಿ ಅಂಚೆ ಕಛೇರಿಗಳ ಸಹಭಾಗಿತ್ವದಲ್ಲಿ ನಾಳೆ (ಸೆ.26) ಅಂಚೆ ಜನಸಂಪರ್ಕ ಅಭಿಯಾನ ಆಯೋಜಿಸಲಾಗಿದೆ.
ಮಂಗಳವಾರ ಮಧ್ಯಾಹ್ನ 3-00 ಗಂಟೆಗೆ ಹರಿಹರ ಮುಖ್ಯ ಅಂಚೆ ಕಛೇರಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆಯನ್ನು ಅಂಚೆ ಅಧೀಕ್ಷಕ ಚಂದ್ರಶೇಖರ್ , ಹರಿಹರ ಅಂಚೆ ಪಾಲಕ ರಾಮಪ್ಪ ಸಾತ್ಪಾಡಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಹಾಯಕ ಅಂಚೆ ಅಧೀಕ್ಷಕ ಜೆ. ಗುರುಪ್ರಸಾದ್ , ಹರಿಹರ ಡಿ.ಆರ್.ಎಂ. ಪದವಿಪೂರ್ವ ಕಾಲೇಜು ಪ್ರಾಚಾರ್ಯ ರಾಜಶೇಖರಯ್ಯ, ಶ್ರೀಮತಿ ಗಿರಿಯಮ್ಮ ಆರ್. ಕಾಂತಪ್ಪ ಶ್ರೇಷ್ಠ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಗುರುಬಸವರಾಜಯ್ಯ ಹೆಚ್.ಎಂ. ಭಾಗವಹಿಸಲಿದ್ದಾರೆ.
ಅಂಚೆ ಕಛೇರಿಯ ಎಲ್ಲಾ ಸೇವೆಗಳು ಒಂದೇ
SB, RD, MSSC and & PLI, RPLI, IPPB ಖಾತೆಗಳ ತೆರೆಯುವಿಕೆ , ಆಧಾರ್ ಸೀಡಿಂಗ್, ಅಪಘಾತ ವಿಮೆ ಪಾಲಿಸಿಗಳು(GAG)ಗಳು ಒಂದೇ ಸೂರಿನಡಿ ದೊರೆಯಲಿದೆ. ಈ ಜನ ಸಂಪರ್ಕ ಅಭಿಯಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಬೇಕೆಂದು ಕೋರಲಾಗಿದೆ.
ದಾವಣಗೆರೆ; ಭದ್ರಾ ನಾಲೆ ನೀರಿಗಾಗಿ ಬೆಳ್ಳಗ್ಗೆಯಿಂದಲೇ ಬಂದ್ ಬಿಸಿ ; ಪೊಲೀಸ್ ಬಿಗಿ ಬಂದೋಬಸ್ತ್



