ದಾವಣಗೆರೆ: ಶ್ರೀ ದುರ್ಗಾಂಬಿಕಾ  ವಿದ್ಯಾ ಸಂಸ್ಥೆಯಲ್ಲಿ ಖಾಲಿ ಇರುವ 3 ಪ್ರೌಢಶಾಲೆ ಶಿಕ್ಷಕರ ಭರ್ತಿಗೆ ಅರ್ಜಿ ಆಹ್ವಾನ; ಸರ್ಕಾರಿ ವೇತನ ಶ್ರೇಣಿ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ದಾವಣಗೆರೆ: ಶ್ರೀ ದುರ್ಗಾಂಬಿಕಾ ವಿದ್ಯಾ ಸಂಸ್ಥೆ (ರಿ) ಶಿವಾಜಿ ನಗರ  ಆಶ್ರಯದಲ್ಲಿ ನಡೆಯುತ್ತಿರುವ ನಗರದ ಹೊಂಡದ ರಸ್ತೆಯ ಶ್ರೀ ದುರ್ಗಾಂಬಿಕಾ ಸಂಯುಕ್ತ ಪ್ರೌಢಶಾಲೆ (ಅನುದಾನಿತ ) ಶಾಲೆಯಲ್ಲಿ ಖಾಲಿ ಇರುವ 3 ಸಹ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ನಿರ್ದೇಶಕರು (ಪ್ರೌಢ ಶಿಕ್ಷಣ) ಆಯುಕ್ತರ ಕಚೇರಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನೇಮಕಾತಿ ಆದೇಶದ ಪ್ರಕಾರ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

  • ಶಿಕ್ಷಕ ಹುದ್ದೆಗಳ ವಿವರ
  • ಸಹ ಶಿಕ್ಷಕ ವಿಜ್ಞಾನ (ಸಿಬಿಜಡ್), 1 ಹುದ್ದೆ, ಅರ್ಹತೆ: ಬಿ.ಎಸ್ಸಿ ಬಿ.ಇಡಿ, ಮೀಸಲಾತಿ: ಪ.ಪಂ (ಎಸ್ಟಿ)
  • ಸಹ ಶಿಕ್ಷಕ ಹಿಂದಿ,  1 ಹುದ್ದೆ, ಅರ್ಹತೆ:  ಬಿ.ಎ ಬಿ.ಇಡಿ, ಮೀಸಲಾತಿ: ಪ.ಜಾತಿ (ಎಸ್.ಸಿ.)
  • ಸಹಶಿಕ್ಷಕ ಕನ್ನಡ, 1 ಹುದ್ದೆ,  ಅರ್ಹತೆ:  ಬಿ.ಎ ಬಿ.ಇಡಿ, ಮೀಸಲಾತಿ: ಸಾಮಾನ್ಯ ಅಭ್ಯರ್ಥಿ

ವಿಶೇಷ ಸೂಚನೆ: 1) ಆಯ್ಕೆ ಬಯಸುವ ಅಭ್ಯರ್ಥಿಗಳು ಒಂದು ಪ್ರತಿಯನ್ನು ಉಪನಿರ್ದೇಶಕರು ಸಾ.ಶಿ ಇಲಾಖೆ (ಆಡಳಿತ) ದಾವಣಗೆರೆ ಜಿಲ್ಲೆ ದಾವಣಗೆರೆ ಇವರಿಗೆ ಸಲ್ಲಿಸುವುದು.  2) ಅರ್ಹ ಅಭ್ಯರ್ಥಿಗಳು ಪೂರ್ಣ ಮಾಹಿತಿ ಹಾಗೂ ದೃಢೀಕೃತ ದಾಖಲೆ/ಗಳೊಂದಿಗೆ ಅರ್ಜಿಯನ್ನು ಈ ಜಾಹಿರಾತು ಪ್ರಕಟಣೆಯಾದ ೨೧ ದಿನಗಳ ಒಳಗಾಗಿ ಈ ಕೆಳಕಾಣಿಸಿದ ವಿಳಾಸಕ್ಕೆ ಅರ್ಜಿ ಸಲ್ಲಿಸಿ ಅರ್ಜಿಯ ಒಂದು ಪ್ರತಿಯನ್ನು ಉಪನಿರ್ದೇಶಕರು ಸಾ.ಶಿ ಇಲಾಖೆ (ಆಡಳಿತ) ದಾವಣಗೆರೆ ಜಿಲ್ಲೆ ದಾವಣಗೆರೆ ಇವರಿಗೆ ಸಲ್ಲಿಸತಕ್ಕದ್ದು ಅರ್ಜಿಯ ಜೊತೆ ರೂ ೧೦೦೦/- (ಒಂದು ಸಾವಿರ ) ರಾಷ್ಟ್ರಿಕೃತ ಬ್ಯಾಂಕುಗಳ ಡಿ.ಡಿ /ಐ.ಪಿ.ಓ ಅನ್ನು ಅಧ್ಯಕ್ಷರು/ಕಾರ್ಯದರ್ಶಿಗಳು ಶ್ರೀ ದುರ್ಗಾಂಬಿಕಾ ವಿದ್ಯಾ ಸಂಸ್ಥೆ (ರಿ) ಶಿವಾಜಿ ನಗರ ದಾವಣಗೆರೆ- -577001  ಇವರ ಹೆಸರಲ್ಲಿ ಸಲ್ಲಿಸತಕ್ಕದ್ದು. ಸಂದರ್ಶನದ ದಿನಾಂಕವನ್ನು ಮುಂದೆ ತಿಳಸಲಾಗುವುದು. ನಿಗದಿ ಪಡಿಸಿದ ದಿನಾಂಕದ ನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.  ಹೆಚ್ಚಿನ ಮಾಹಿತಿಗಾಗಿ:- 9483748275, 8310457481 ಸಂಪರ್ಕಿಸಿ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *