ದಾವಣಗೆರೆ: ಗ್ಯಾಸ್ ಗೀಸರ್ ಸ್ಫೋಟ; ವ್ಯಕ್ತಿ ಸಾವುದಾವಣಗೆರೆ: ಗ್ಯಾಸ್ ಗೀಸರ್ ಸ್ಫೋಟಗೊಂಡು ಗಾಯಗೊಂಡಿದ್ದ ರಾಘವೇಂದ್ರ(42) ಮೃತಪಟ್ಟಿದ್ದಾರೆ. ಸ್ನಾನಕ್ಕೆ ಗೀಸರ್ ಆನ್ ಮಾಡಲು ಹೋದಾಗ ಈ ಘಟನೆ ನಡೆದಿತ್ತು.
ಶನಿವಾರ ಈ ದುರ್ಘಟನೆ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಎಸ್ ಎಸ್ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಇಂದು (ಮಾ.2) ಮುಂಜಾನೆ ಮೃತಪಟ್ಟಿದ್ದಾರೆ. ಹರಿಹರ ವಿದ್ಯಾನಗರ ನಿವಾಸಿಯಾದ ಅವರು ಅರೆಕಾಲಿಕ ಪತ್ರಕರ್ತರಾಗಿದ್ದು, ಇತ್ತೀಚೆಗೆ ಹೋಟೆಲ್ ಆರಂಭಿಸಿದ್ದರು. ಪತ್ನಿ, ಪುತ್ರಿ ಇದ್ದಾರೆ.