Connect with us

Dvgsuddi Kannada | online news portal | Kannada news online

ಹರಿಹರ ಗ್ರಾಮದೇವತೆ ಜಾತ್ರೆಗೆ ಬಲಿ ನೀಡಲು ಬಿಟ್ಟಿದ್ದ ಕೋಣ ರಕ್ಷಣೆ ಮಾಡಿದ ಪೊಲೀಸರು

ಹರಿಹರ

ಹರಿಹರ ಗ್ರಾಮದೇವತೆ ಜಾತ್ರೆಗೆ ಬಲಿ ನೀಡಲು ಬಿಟ್ಟಿದ್ದ ಕೋಣ ರಕ್ಷಣೆ ಮಾಡಿದ ಪೊಲೀಸರು

ಹರಿಹರ: ಗ್ರಾಮದೇವತೆಗೆ ಬಲಿ ನೀಡಲು ಬಿಟ್ಟಿದ್ದ ಕೋಣವನ್ನು ಪೊಲೀಸರು ವಶಕ್ಕೆ ಪಡೆದು ರಕ್ಷಣೆ ಮಾಡಿದ್ದಾರೆ. ದೇವರ ಹೆಸರಲ್ಲಿ ಪ್ರಾಣಿ ಬಲಿ ಕೊಡುವುದನ್ನು  ಹೈಕೋರ್ಟ್ ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ  ಡಿವೈಎಸ್‌ಪಿ ಬಸವರಾಜ್ ನಾಯ್ಕ್ ನೇತೃತ್ವದಲ್ಲಿ  ಬಲಿ ಕೋಣ ಪತ್ತೆ ಮಾಡಿ ಸೆರೆಹಿಡಿದು ಹರಿಹರ ನಗರ ಪೊಲೀಸ್ ಠಾಣೆಯ ಆವರಣದಲ್ಲಿ ಕಟ್ಟಿ ಹಾಕಿದ್ದಾರೆ.

ಯಾವ ದೇವರು ಪ್ರಾಣಿ ಬಲಿ ಬೇಡುವುದಿಲ್ಲ. ಇದು ಮೂಢನಂಬಿಕೆ.  ಶಿರಸಿ ಮಾರಿಕಾಂಬಾ ದೇವಿ ಜಾತ್ರೆಯ ಮಾದರಿಯಲ್ಲಿ ಕೋಣದ ದೇಹದಿಂದ ಅಲ್ಪ ರಕ್ತ ಪಡೆದು ಹಬ್ಬದಾಚರಣೆ ಮಾಡಲು ಅವಕಾಶವಿದೆ. ಪ್ರಾಣಿಗಳನ್ನು ಧರ್ಮದ ಹೆಸರಲ್ಲಿ ಕ ಕೊಲ್ಲಬೇಡಿ ಎಂದು  ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಿಪಿಐ ಸತೀಶ್‌ಕುಮಾರ್ ಯು., ಪಿಎಸ್‌ಐ ಸುನೀಲ್ ಕುಮಾರ್ ತೇಲಿ, ಸಾರ್ವಜನಿಕರು ಇದ್ದರು.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಹರಿಹರ

To Top