ವಿಜಯನಗರ: ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಉಚ್ಚoಗಿದುರ್ಗದಲ್ಲಿ ಗುರುವಾರ ಉಚ್ಚoಗೇಮ್ಮನಿಗೆ ಹರಕೆ ರೂಪದಲ್ಲಿ ಸಲ್ಲಿಸಿದ ಸೀರೆಗಳ ಹರಾಜು ನಡೆಯಿತು. ಒಟ್ಟು 6 ಲಕ್ಷ 91 ಸಾವಿರಲ್ಲಿ ಸೀರೆಗಳ ಹರಾಜು ಹಾಕಲಾಯಿತು.
ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರಾದ ಎಂ.ಎಚ್. ಪ್ರಕಾಶ್ ರಾವ್ ಹಾಗೂ ಗ್ರಾಮಸ್ಥರೂ,ಹರಾಜುದಾರರ ಸಮ್ಮುಖದಲ್ಲಿ ದೇವಿಗೆ ಕಾಣಿಕೆ ರೂಪದಲ್ಲಿ ಸಲ್ಲಿಸಿದ ವಿವಿಧ ಬಗೆಯ ಸೀರೆಗಳು ಹರಾಜು ಕರೆಯಲಾಗಿತ್ತು.ಈ ಹರಾಜಿನಿಂದ ಒಟ್ಟು 6 ಲಕ್ಷ 91 ಸಾವಿರ ರೂ ಹಣ ಸಂಗ್ರಹವಾಗಲಿದ್ದು ಈ ಹಣವನ್ನು ದೇವಸ್ಥಾನದ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಎಚ್ ಮಲ್ಲಪ್ಪ ತಿಳಿಸಿದ್ದಾರೆ.