ದಾವಣಗೆರೆ; ಗ್ರಾಮಾಂತರ ಮಟ್ಟದಲ್ಲಿರುವ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿ ಉಚಿತ ಆಯುಷ್ಮಾನ್ ಭಾರತ್ ಕಾರ್ಡ್ಗಳನ್ನು ಎಲ್ಲಾ ಪಡಿತರ ಫಲಾನುಭವಿಗಳಿಗೆ ಶಿಬಿರಗಳ ಮೂಲಕ ನೋಂದಣಿಯನ್ನು ಹಮ್ಮಿಕೊಳ್ಳಲಾಗಿದೆ.
ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ನೋಂದಣಿಯಾದ ಬಿ.ಪಿ.ಎಲ್ ಫಲಾನುಭವಿ ಕುಟುಂಬವು ವಾರ್ಷಿಕ 5 ಲಕ್ಷದವರೆಗೆ ಮತ್ತು ಎ.ಪಿ.ಎಲ್ ಫಲಾನುಭವಿ ಕುಟುಂಬವು ವಾರ್ಷಿಕ 1.5 ಲಕ್ಷದವರೆಗೆ ಅಥವಾ ಚಿಕಿತ್ಸೆಯ 30% ರಷ್ಟು ನಗದು ರೈತ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತದೆ. ಹಾಗೂ ಈ ಕಾರ್ಡುದಾರನ ಚಿಕಿತ್ಸೆಯ ಎಲ್ಲಾ ಮಾಹಿತಿಯು ಈ ಕಾರ್ಡಿನೊಂದಿಗೆ ಅಡಕವಾಗಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಗ್ರಾಮ ಒನ್ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಅಪಾರ ಜಿಲ್ಲಾಧಿಕಾರಿ ಪಿ.ಎನ್ ಲೋಕೆಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



