ದಾವಣಗೆರೆ: ಕಳೆನಾಶಕದಿಂದ ಒಣಗಿದ ಹುಲ್ಲು; ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ ನಿಂದ ಹೊತ್ತಿದ ಬೆಂಕಿ ಕಿಡಿ- ನೋಡ ನೋಡುತ್ತಲೇ 650 ಅಡಿಕೆ ಮರ ಸುಟ್ಟು ಭಸ್ಮ..!!

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ಅಡಿಕೆ ತೋಟದಲ್ಲಿ ಹುಲ್ಲು ಇದೆ ಎಂದು ರೈತನೊಬ್ಬ ಕಳೆನಾಶಕ ಸಿಂಪಡಿಸಿದ್ದ. ಇದರಿಂದ ಇಡೀ ತೋಟದ ಹುಲ್ಲು ಸಹ ಒಣಗಿತ್ತು. ಆದರೆ, ರೈತನ ದುರದೃಷ್ಟವೋ ಏನೋ… ತೊಟಕ್ಕೆ ನೀರು ಬಿಡಲು ಮೋಟರ್ ಆನ್ ಮಾಡುತ್ತಿದ್ದಂತೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ ನಿಂದ ಹೊತ್ತಿದ ಕಿಡಿ, ನೋಡ ನೋಡುತ್ತಲೇ ಒಣಗಿದ ಹುಲ್ಲಿನಿಂದ ಇಡೀ‌ ತೋಟ ಆವರುಸಿದ್ದು, 650 ಅಡಿಕೆ ಮರ ಸುಟ್ಟು ಭಸ್ಮವಾಗಿವೆ.

ಈ ಘಟನೆ ಜಗಳೂರು ತಾಲ್ಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತ ಬಸವನಗೌಡ ಎಂಬುವರಿಗೆ ಸೇರಿದ 1.35 ಎಕರೆ ಜಮೀನಿನಲ್ಲಿ ಬೆಳೆದಿದ್ದ 650 ಅಡಿಕೆ
ಮರಗಳು ಬೆಂಕಿಯ ಜ್ವಾಲೆಗೆ ಸುಟ್ಟು ಹೋಗಿವೆ. ಮಟ ಮಟ ಮಧ್ಯಾಹ್ನ ಬೋರ್ ವೆಲ್ ಆನ್ ಆಗುತ್ತಿದ್ದಂತೆ ತಕ್ಷಣ ಸ್ಟಾಟರ್ ನಿಂದ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ ಆಗಿ ಬೆಂಕಿ ಹೊತ್ತಿಕೊಂಡಿದೆ. ತೋಟಕ್ಕೆ ಕಳೆ ನಾಶಕ ಸಿಂಪಡಿಸಿದ್ದರಿಂದ
ಹುಲ್ಲು, ಗಿಡ ಗಂಟಿಗಳು ಒಣಗಿದ್ದವು. ಹೀಗಾಗಿ ಕ್ಷಣಾರ್ಧದಲ್ಲಿ ಇಡೀ ತೋಟಕ್ಕೆ ಬೆಂಕಿ ಆವರಿಸಿಕೊಂಡಿದೆ.

ರೈತ ಕಣ್ಣೀರು: ಸುತ್ತಮುತ್ತಲಿನ ರೈತರು ಸೇರಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾದರೂ ಸಹ ಪರಿಸ್ಥಿತಿ ಕೈಮೀರಿ ಇಡೀ ತೋಟವೇ ಸುಟ್ಟು ಕರಕಲಾಗಿದೆ .ಮೂರು ವರ್ಷಗಳಿಂದ ಬೆಳಸಲಾಗಿದ್ದ ಅಡಿಕೆ ತೋಟ ಘಟನೆಯಿಂದ ಲಕ್ಷಾಂತರ ರೂ ನಷ್ಟವಾಗಿದೆ. ಕೈಗೆ ಬಂದ ತುತ್ತು ಬಾಯಿಗೆಬಾರದಂತಾಯಿತು ಎಂದು ಎಂದು ರೈತ ಬಸವನಗೌಡ ಕಣ್ಣೀರು ಹಾಕಿದ್ದಾನೆ.

ಬೆಸ್ಕಾಂ ತಪ್ಪಿಲ್ಲ, ಪರಿಹಾರ ನೀಡಲು ಸಾಧ್ಯವಿಲ್ಲ; ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಬೆಸ್ಕಾಂ ಎಇಇ ಸುಧಾಮಣಿ, ಎಸ್‌ಒ ರಂಗನಾಥ್, ಪರಿಶೀಲನೆ ನಡೆಸಿದರು.ವಿದ್ಯುತ್ ಮೇನ್ ವೈಯರ್ ಕಟ್ ಆಗಿದ್ದರೆ ಅದು ಬೆಸ್ಕಾಂ ಜವಾಬ್ದಾರಿಯಾಗಿರುತ್ತಿತ್ತು. ಸ್ಟಾಟರ್ ನಿಂದ ಔಟ್‌ಪುಟ್ ಸಪ್ಲೇಯ ವೈಯ‌ ಬ್ಲಾಸ್‌ಟ್‌ನಿಂದ ವಿದ್ಯುತ್ ಅವಘಡ ಆಗಿದೆ. ಅದಕ್ಕೆ ನಾವು ಜವಾಬ್ದಾರರಲ್ಲ. ಈ ಪ್ರಕಣದಲ್ಲಿ ಬೆಸ್ಕಾಂ ತಪ್ಪಿಲ್ಲ. ಹೀಗಾಗಿ ಬೆಸ್ಕಾಂ ಪತಿಹಾರ ನೀಡಲು ಬರುವುದಿಲ್ಲ ಎಂದಿದ್ದಾರೆ.

ನೆರವಿಗೆ ಸ್ಥಳೀಯರ ಆಗ್ರಹ: ಕಂದಾಯ,ಇಲಾಖೆ ಧನಂಜಯ್, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪ್ರಭುಶಂಕರ್, ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಸಕ ಬಿ.ದೇವೇಂದ್ರಪ್ಪ ಮಾನವೀಯ ದೃಷ್ಟಿಯಿಂದ ಪರಿಗಣಿಸಿ. ಇಲಾಖೆ ನಿಯಮಗಳ ಅನುಸಾರ ರೈತನಿಗೆ ಪರಿಹಾರ ನೀಡಿ ಎಂದು ಸೂಚನೆ ನೀಡಿದ್ದಾರೆ. ಸ್ಥಳೀಯರು ಸಹ ಇಲಾಖೆಯಿಂದ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಶಾಸಕ ಬಿ.ದೇವಪ್ಪ, ರೈತನಿಗೆ ವೈಯಕ್ತಿಕವಾಗಿ 50,000 ರೂ ನೆರವು ನೀಡಿದ್ದಾರೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *