Connect with us

Dvgsuddi Kannada | online news portal | Kannada news online

ದಾವಣಗೆರೆ; ಆಕಸ್ಮಿಕ ಬೆಂಕಿ ತಗುಲಿ ಫಲಕ್ಕೆ ಬಂದಿದ್ದ 50 ಮಾವಿನ ಮರ ಸುಟ್ಟು ಭಸ್ಮ

ಪ್ರಮುಖ ಸುದ್ದಿ

ದಾವಣಗೆರೆ; ಆಕಸ್ಮಿಕ ಬೆಂಕಿ ತಗುಲಿ ಫಲಕ್ಕೆ ಬಂದಿದ್ದ 50 ಮಾವಿನ ಮರ ಸುಟ್ಟು ಭಸ್ಮ

ದಾವಣಗೆರೆ; ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ಟೆಹಳ್ಳಿ ಸಮೀಪದ ಮಾವಿನ ತೋಟವೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಫಲಕ್ಕೆ ಬಂದ 50 ಗಿಡಗಳು ಸುಟ್ಟು ಭಸ್ಮವಾಗಿದ್ದು, 2 ಲಕ್ಷರೂ. ನಷ್ಟ ಸಂಭವಿಸಿದೆ.

ರೈತ ಮೊಹಮ್ಮದ್ ಜಬೀವುಲ್ಲಾ ಹಾಗೂ ಸಹೋದರಿಗೆ ಸೇರಿದ 2 ಎಕರೆ 17 ಗುಂಟೆ ಜಮೀನಿನಲ್ಲಿ 135 ಸಸಿಗಳನ್ನು ನಾಟಿ ಮಾಡಿದ್ದರು. 50ಕ್ಕೂ ಹೆಚ್ಚು ಮರ ಬೆಂಕಿಗೆ ಆಹುತಿಯಾಗಿವೆ. ಫಲಭರಿತ ಮಾವು ಕೈಗೆ ಸಿಗದಂತಾಗಿದೆ.‌ಕಳೆದ ವರ್ಷ 2.5 ಲಕ್ಷ ರೂ. ಆದಾಯ ಬಂದಿತ್ತು. ಈ ಸಲ ಬೆಂಕಿಯಿಂದ ಮರದ ಜೊತೆ ಸಮೃದ್ಧವಾಗಿದ್ದ ಫಸಲು ಸುಟ್ಟು ಸುಮಾರು 2 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು ತೋಟಕ್ಕೆ ಭೇಟಿ ನೀಡಿ, ಪರಿಶೀಲಿಸಿ ಬೆಳೆ ಪರಿಹಾರ ನೀಡಬೇಕು ಎಂದು ರೈತ ಮೊಹಮ್ಮದ್ ಜಬೀವುಲ್ಲಾ ಆಗ್ರಹಿಸಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಗ್ನಿ ಶಾಮಕ ದಳ ಬೆಂಕಿ ನಂದಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top