Connect with us

Dvgsuddi Kannada | online news portal | Kannada news online

ದಾವಣಗೆರೆ ದುಗ್ಗಮ್ಮ‌ ಜಾತ್ರೆ; ಭಕ್ತರ ವಾಹನಗಳ ಪಾರ್ಕಿಂಗ್‌ಗೆ ಎಲ್ಲೆಲ್ಲಿ ಸ್ಥಳಾವಕಾಶ ಕಲ್ಪಸಲಾಗಿದೆ ಎಂದು ತಿಳಿಯಲು ಈ‌ ಲಿಂಕ್ ಮೇಲೆ ಕ್ಲಿಕ್ ಮಾಡಿ…!!!

IMG 20240318 114040

ದಾವಣಗೆರೆ

ದಾವಣಗೆರೆ ದುಗ್ಗಮ್ಮ‌ ಜಾತ್ರೆ; ಭಕ್ತರ ವಾಹನಗಳ ಪಾರ್ಕಿಂಗ್‌ಗೆ ಎಲ್ಲೆಲ್ಲಿ ಸ್ಥಳಾವಕಾಶ ಕಲ್ಪಸಲಾಗಿದೆ ಎಂದು ತಿಳಿಯಲು ಈ‌ ಲಿಂಕ್ ಮೇಲೆ ಕ್ಲಿಕ್ ಮಾಡಿ…!!!

ದಾವಣಗೆರೆ: ನಗರ ದೇವತೆ ಶ್ರೀ ದುರ್ಗಾಂಭಿಕಾದೇವಿ ಮತ್ತು ವಿನೋಭಾನಗರ ಶ್ರೀ ಚೌಡೇಶ್ವರಿದೇವಿ ಜಾತ್ರೆಗೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿದೆ. ಸುಗಮ ಸಂಚಾರಕ್ಕೆ ದಾವಣಗೆರೆ ನಗರದಲ್ಲಿ ಕೆಲ ಮಾರ್ಗಗಳನ್ನು ಒಮ್ಮುಖ ರಸ್ತೆಗಳನ್ನಾಗಿ ಹಾಗೂ ಭಕ್ತರು ಬರುವ ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ಸ್ಥಳ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ. ಈ ಲಿಂಕ್ ಮೂಲಕ https://goo.gl/maps/hfWpuG6BxiBVXWCLA ಪಾರ್ಕಿಂಗ್‌ಗೆ ಎಲ್ಲೆಲ್ಲಿ ಸ್ಥಳಾವಕಾಶ ಕಲ್ಪಸಲಾಗಿದೆ  ಎಂದು ತಿಳಿಯಬಹುದಾಗಿದೆ.

ಮಾ‌. 19, 20ರಂದು ದಾವಣಗೆರೆ ನಗರದಲ್ಲಿ ನಡೆಯಲಿರುವ ನಗರ ದೇವತೆ ಶ್ರೀ ದುರ್ಗಾಂಭಿಕಾ ದೇವಿ ಜಾತ್ರೆ ಮತ್ತು ವಿನೋಭಾನಗರ ಶ್ರೀ ಚೌಡೇಶ್ವರಿ ದೇವಿಯ ಜಾತ್ರೆಯ ಪ್ರಯುಕ್ತ ಸಾರ್ವಜನಿಕರ ಅನುಕೂಲಕ್ಕಾಗಿ ಹಾಗು ಸುಗಮ ಸಂಚಾರದ ಪ್ರಯುಕ್ತ ಹಳೇ ಪಿ.ಬಿ ರಸ್ತೆಯ ಅರುಣಾ ಸರ್ಕಲ್‌ನಿಂದ ಹೊಂಡದ ಸರ್ಕಲ್ ವರೆಗೆ ಹೊಂಡದ ರಸ್ತೆಯನ್ನು ಹಾಗೂ ಹೊಂಡದ ಸರ್ಕಲ್‌ನಿಂದ ಕೋರ್ಟ್ ಸರ್ಕಲ್ ವರೆಗೆ ಜಾಲಿನಗರ 2ನೇ ಮುಖ್ಯ ರಸ್ತೆ ಮತ್ತು ಶಿವಾಲಿ ರಸ್ತೆಗಳನ್ನು ಮಾ. 18ರಿಂದ ಮಾ.21 ತಾತ್ಕಾಲಿಕವಾಗಿ ಒಮ್ಮುಖ ರಸ್ತೆಗಳನ್ನಾಗಿ ಮಾಡಲಾಗಿರುತ್ತದೆ.

ಪೊಲೀಸ್ ಬಂದೋಬಸ್ತ್ : ಜಾತ್ರೆಯ ಸಂಬಂಧ ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆ & ಹೊರಜಿಲ್ಲೆಯಿಂದ ಪೊಲೀಸ್ ಅಧಿಕಾರಿ – ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, 04 ಕೆ ಎಸ್ ಆರ್ ಪಿ ತುಕಡಿಗಳು, 07 ಜಿಲ್ಲಾ ಸಶಸ್ತ್ರ ಮೀಸಲು ಪಡೆ ಹಾಗೂ ವಿಶೇಷ ಗಸ್ತುವಾಹನಗಳನ್ನು ನಿಯೋಜಿಸಲಾಗಿದೆ ಮತ್ತು ಪ್ರಾಣಿ ಬಲಿ ತಡೆಗೆ ಚೆಕ್ ಪೋಸ್ಟ್ ಗಳನ್ನು ತೆರೆದು ಜೊತೆಗೆ ನಿಗಾವಣೆಗೆ ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗಿದೆ. ನಗರದಾದ್ಯಂತ ಡೋನ್ ಕಣ್ಗಾವಲು ಇರಿಸಲಾಗಿದೆ.

ಶ್ರೀ ದುರ್ಗಾಂಭಿಕಾದೇವಿ ಜಾತ್ರೆಗೆ ಬರುವ ಸಾರ್ವಜನಿಕರುಗಳು ಅರುಣಾ ಸರ್ಕಲ್ ನಿಂದ ಹೊಂಡದ ರಸ್ತೆ ಕಡೆಗೆ ಬಂದು ಜಾಲಿನಗರ 2 ನೇ ಮೇನ್ ರಸ್ತೆಯಿಂದ ಶಿವಾಲಿ ರಸ್ತೆಯ ಮೂಲಕ ಕೋರ್ಟ್‌ ಸರ್ಕಲ್ ಕಡೆಗೆ ಹೋಗಲು ಸೂಚಿಸಿದೆ. ಹಾಗೂ ಹಳೇ ಪಿಬಿ ರಸ್ತೆ ಕಡೆಯಿಂದ ಬರುವ ಭಕ್ತಾಧಿಗಳು ಅರುಣ ಸರ್ಕಲ್ ಸಮೀಪದ ಹಳೇ ವಾಣಿಹೊಂಡ ಶೋ ರೂಂ ಪಕ್ಕದ ಖಾಲಿ ಜಾಗದಲ್ಲಿ ಪಾರ್ಕಿಂಗ್ ಮಾಡಿ ಅರುಣ ವೃತ್ತದಿಂದ ಹೊಂಡದ ವೃತ್ತದ ಮಾರ್ಗಾವಾಗಿ ಕಾಲು ನಡಿಗೆಯಲ್ಲಿ ದೇವರ ದರ್ಶನಕ್ಕೆ ತೆರಳುವುದು ಅಥವಾ ಸಂಗೋಳ್ಳಿ ರಾಯಣ್ಣ ವೃತ್ತದ ಮೂಲಕ ಆರ್.ಟಿ.ಓ ವೃತ್ತಕ್ಕೆ ಬಂದು ಬೂದಾಳ್ ರಸ್ತೆ & ಕೊಂಡಜ್ಜಿ
ರಸ್ತೆಗೆ ಹೊಂದಿಕೊಂಡಂತೆ ಮಾಡಿರುವ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿ ಕಾಲು ನಡಿಗೆಯಲ್ಲಿ ದೇವರ ದರ್ಶನಕ್ಕೆ ತೆರಳಲು ವ್ಯವಸ್ಥೆ ಮಾಡಲಾಗಿದ್ದು, ದಾವಣಗೆರೆ ನಗರದಲ್ಲಿ ವಾಹನಗಳ ನಿಲುಗಡೆ ಸ್ಥಳಗಳ ವಿವರ ಈ ಕೆಳಗಿನಂತರುತ್ತದೆ.

  • ಪಾರ್ಕಿಂಗ್ ಸ್ಥಳ
  • ದುರ್ಗಾಂಭಿಕ ಕಾಂಪ್ಲೆಕ್ಸ್ ಕೊಂಡಜ್ಜಿ ರಸ್ತೆ, ದ್ವಿ ಚಕ್ರ ವಾಹನಗಳು
  • ದುರ್ಗಾಂಭಿಕ ಶಾಲೆಯ ಆವರಣದ ಒಳಭಾಗದಲ್ಲಿ
    ಜಾಲಿನಗರ, ರಸ್ತೆ, ಹೊಂಡದ ವೃತ್ತ ಹತ್ತಿರ, ದ್ವಿಚಕ್ರ ಹಾಗೂ ನಾಲ್ಕು ಚಕ್ರ
    ವಾಹನಗಳು
  • ಎಂ ಎನ್ ಸಿ ಕಾನ್ವೆಂಟ್ ಸ್ಕೂಲ್ ಮುಂಬಾಗ ಕೊಂಡಜ್ಜಿ ರಸ್ತೆ,ದ್ವಿ ಚಕ್ರ ವಾಹನಗಳು
  • ದುರ್ಗಾಂಭಿಕಾ ಮೈದಾನ (ಕಾಂಪೌಂಡ್ ಹಾಕಿರುವ ಖಾಲಿಜಾಗ) ಬೂದಾಳ್ ರಸ್ತೆ ಇಂದಿರಾ ಕ್ಯಾಂಟಿನ್ ಹತ್ತಿರ,ದ್ವಿಚಕ್ರ ಹಾಗೂ ನಾಲ್ಕು ಚಕ್ರ
    ವಾಹನಗಳು
  • ಫ್ರೆಶ್ ಬೇಕರಿ ಎದುರು ಗೌರ ಸಂದ್ರ ಮಾರಮ್ಮ ದೇವಾಸ್ಥಾನ, ರಸ್ತೆ (ಬೂದಾಳ್ ರಿಂಗ್ ರೋಡ್ ಸಮೀಪ),ನಾಲ್ಕು ಚಕ್ರ ವಾಹನಗಳು
  • ದ್ವಿ ಅನ್ನಪೂರ್ಣ ಲ್ಯಾಬ್ ಮುಂಭಾಗ, ಮುರುಘರಾಜೇಂದ್ರ ಶಾಲೆ ಬಳಿ, ದ್ವಿ ಚಕ್ರ ವಾಹನಗಳು
  • ಚೌಡೇಶ್ವರಿ ದೇವಾಸ್ಥಾನ ಮೈದಾನ, ಶಿವ ನಗರ, ಕೈಲಾಸ ರಸ್ತೆ,ದ್ವಿ ಚಕ್ರ ವಾಹನಗಳು
  • VVIP Vehicle Parking – ಖಡಕ್ ಷಾ ವಲಿ ದರ್ಗಾ ಸಮೀಪ,ನಾಲ್ಕು ಚಕ್ರ ವಾಹನಗಳು
  • (ದುಗ್ಗಮ್ಮ ದೇವಾಸ್ಥಾನದ ಸಮೀಪ)
    ಕಾಳಿಕಾದೇವಿ ದೇವಾಸ್ಥಾನದ ಮುಂಭಾಗ (ಹಗೆದಿಬ್ಬ ವೃತ್ತ ಸಮೀಪ),ದ್ವಿ ಚಕ ಹಾಗೂ ನಾಲ್ಕು ಚಕ್ರ
  • ದೇವರಾಜ್ ಆರಸ್ ಬಡಾವಣೆ ಮೈದಾನ, (ಸ್ವಿಮ್ಮಿಂಗ್ ಪೂಲ್ ರಸ್ತೆವೃತ್ತದ ಸಮೀಪ),ನಾಲ್ಕು ಚಕ್ರ ವಾಹನಗಳು
  • ಹಳೇ ವಾಣಿಹೊಂಡ ಶೋ ರೂಂ ಪಕ್ಕದ ಖಾಲಿ ಜಾಗ ಅರುಣ ದ್ವಿ ಚಕ್ರ ಹಾಗೂ ನಾಲ್ಕು ಚಕ್ರ
    ವೃತ್ತದ ಸಮೀಪ, ಹಳೇ ಪಿಬಿ ರಸ್ತೆ,ದ್ವಿ ಚಕ ಹಾಗೂ ನಾಲ್ಕು ಚಕ್ರ ವಾಹನಗಳು
  • ನರಹರಿಶೇಟ್ ಕಲ್ಯಾಣ ಮಂಟಪದ ಖಾಲಿ ಜಾಗ, ಹಳೇ ಪಿಬಿರಸ್ತೆ, ದ್ವಿಚಕ್ರ ಹಾಗೂ ನಾಲ್ಕು ಚಕ್ರ
    ವಾಹನಗಳು
  • ವಿಶ್ವ ಭಾರತಿ ವಿದ್ಯಾಪೀಠದ ಹತ್ತಿರ ಖಾಲಿ ಜಾಗ, ನಮ್ಮೂರು‌ಶಾಂತರಾಮ್ ರಸ್ತೆ, ಎಂಸಿಸಿ ಎ ಬ್ಲ್ಯಾಕ್,ದ್ವಿ ಚಕ ಹಾಗೂ ನಾಲ್ಕು ಚಕ್ರ
    ವಾಹನಗಳು
  • ಜಿಯೋ ಅಫೀಸ್ ಹತ್ತಿರದ ಖಾಲಿ ಜಾಗ, ನಲ್ಲೂರುಶಾಂತರಾಮ್ ರಸ್ತೆ, ಎಂಸಿಸಿ ಎ ಬ್ಲಾಕ್,ದ್ವಿ, ಚಕ್ರ ಹಾಗೂ ನಾಲ್ಕು ಚಕ್ರ
    ವಾಹನಗಳು
  • ಚೌಡೇಶ್ವರಿ ದೇವಾಸ್ಥಾನದ ಹತ್ತಿರದ ದಾವಣಗೆರೆ-ಹರಿಹರಕೋ ಅಪರೇಟಿವ್ ಸೊಸೈಟಿ ಸಮುಧಾಯ ಭವನದ ಪಕ್ಕದಜಾಗ, ವಿನೋಬನಗರ 2ನೇ ಮುಖ್ಯ ರಸ್ತೆ.ದ್ವಿ ಚಕ್ರ ವಾಹನಗಳು
  • ತೋಟಗಾರಿಕೆ ಇಲಾಖೆ ಕಛೇರಿ ಮುಂದಿನ ಪುಟ್ಬಾತ್ ಜಾಗ,ಹಳೇ ಪಿ ಬಿ ರಸ್ತೆ.ದ್ವಿ ಚಕ್ರ ವಾಹನಗಳು

ಸಾರ್ವಜನಿಕರು ಮಾಡಬೇಕಾದ ಕಾರ್ಯಗಳು

  • ನಗರ ದೇವತೆ ಶ್ರೀ ದುರ್ಗಾಂಭಿಕಾ ದೇವಿ ಜಾತ್ರೆ
    ಮತ್ತು ವಿನೋಭಾನಗರ ಶ್ರೀ ಚೌಡೇಶ್ವರಿ ದೇವಿಯ
    ಜಾತ್ರೆಯ ಪುಯುಕ್ತ ದಾವಣಗೆರೆ ನಗರಕ್ಕೆ
    ಆಗಮಿಸುವ ಭಕ್ತಾಧಿಗಳು ಕಡ್ಡಾಯವಾಗಿ ಸಂಚಾರನಿಯಮಗಳನ್ನು ಪಾಲಿಸುವುದು
  • ನಿಗಧಿತ ಸ್ಥಳಗಳವಾಹನಗಳ ಪಾರ್ಕಿಂಗ್ ಮಾಡುವುದು
  • ಜಾತ್ರೆಯಲ್ಲಿ ತಮ್ಮ ಬಂಗಾರದ ಆಭರಣಗಳು,
    ಮೊಬೈಲ್ ಇತರೆ ಮೌಲ್ಯಯುತ ವಸ್ತುಗಳನ್ನು
    ಕಳ್ಳತನ ಮಾಡುವ ಸಾಧ್ಯತೆ ಇರುತ್ತದೆ ಆದ್ದರಿಂದ
    ಜಾತ್ರೆಗೆ ಆಗಮಿಸುವ ಭಕ್ತಾಧಿಗಳು ತಮ್ಮ
    ಮೌಲ್ಯವಾದ ವಸ್ತುಗಳ ಬಗ್ಗೆ ಜಾಗ್ರತೆವಹಿಸುವುದು
  • ನಗರ ದೇವತೆ ಶ್ರೀ ದುರ್ಗಾಂಭಿಕಾ ದೇವಿ ಮತ್ತು
    ವಿನೋಭಾನಗರ ಶ್ರೀ ಚೌಡೇಶ್ವರಿ ದೇವಿಯ
    ದೇವಸ್ಥಾನದ ಆವರಣದಲ್ಲಿ ಮೌಡ್ಯಾಚರಣೆಗಳನ್ನು ನಿಷೇಧವಿದ್ದು, ಯಾರೂ ಕೂಡ ಆಚರಣೆ ಮಾಡದೆ ಕಾನೂನನ್ನು ಪಾಲನೆ ಮಾಡಬೇಕು
  • ನಗರ ದೇವತೆ ಶ್ರೀ ದುರ್ಗಾಂಭಿಕಾ ದೇವಿ ಮತ್ತು
    ವಿನೋಭಾನಗರ ಶ್ರೀ ಚೌಡೇಶ್ವರಿ ದೇವಿಯ
    ದೇವಸ್ಥಾನದ ಆವರಣದ ಸುತ್ತ ಮುತ್ತ ಹಾಗೂ
    ಸಾರ್ವಜನಿಕ ಪ್ರದೇಶದಲ್ಲಿ ಯಾವುದೇ ಪ್ರಾಣಿ ಬಲಿಮಾಡುವುದಕ್ಕೆ ಅವಕಾಶವಿರುವುದಿಲ್ಲ
  • ಜಾತ್ರೆಯ ಸಮಯದಲ್ಲಿ ಪೊಲೀಸ್ ಇಲಾಖೆಗೆ
    ಸಂಬಂಧಿಸಿದಂತೆ ಯಾವುದೇ ತುರ್ತು ಸೇವೆಗಾಗಿ
    ತುರ್ತು ಸಹಾಯವಾಣಿ 112 ನಂಬರ್ ಗೆ ಕರೆ
    ಮಾಡುವುದು ಹಾಗೂ ಸ್ಥಳೀಯ ಪೊಲೀಸರಿಗೆ
    ಮಾಹಿತಿ ನೀಡುವುದು.
  • ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಜಾತ್ರೆ, ಹಬ್ಬಮೆರವಣಿಗೆ, ಕಾರ್ಯಾಕ್ರಮ ನಡೆಸುವ ಬಗ್ಗೆ ಹಾಗೂ ಪ್ಲೆಕ್ಸ್ – ಬ್ಯಾನರ್ಸಗಳನ್ನು ಹಾಕುವುದಕ್ಕೆ ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳಿಂದ
    ಅನುಮತಿ ಪಡೆಯುವುದು

ಸಾರ್ವಜನಿಕರು ಮಾಡಬಾರದಂತಹ
ಕಾರ್ಯಗಳು

  • ಸಂಚಾರ ನಿಯಮಗಳನ್ನು
    ಉಲ್ಲಂಘಿಸಬೇಡಿ, ಎಲ್ಲೆಂದರಲ್ಲಿ
    ವಾಹನಗಳನ್ನು ಪಾರ್ಕಿಂಗ್ ಮಾಡಬಾರದು
  • ದೇವಾಸ್ಥಾನಕ್ಕೆ /ಜಾತ್ರೆಗೆ ಆಗಮಿಸುವ
    ಭಕ್ತಾಧಿಗಳು ಯಾವುದೇ ಬೆಲೆಬಾಳುವ
    ವಸ್ತುಗಳನ್ನು ತರಬಾರದು
  • ದೇವಸ್ಥಾನದ ಆವರಣದಲ್ಲಿ ಮೌಡ್ಯಾಚರಣೆ
    ಮಾಡುವುದು ನಿಷೇಧವಿದ್ದು, ಯಾರೂ
    ಕೂಡ ಮೌಡ್ಯಾಚರಣೆ ಮಾಡಬಾರದು
  • ಪ್ರಾಣಿ ಬಲಿ ಮಾಡಬಾರದು,ಉಲ್ಲಂಘಿಸಿದ್ದಲ್ಲಿ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು
  • ದೇವಸ್ಥಾನ ಆವರಣ ಹಾಗು ಜಾತ್ರೆಯ
    ಸಮಯದಲ್ಲಿ ಅಹಿತಕರ ಘಟನೆಗಳು
    ಜರುಗಿದಾಗ ಯಾರೂ ಕೂಡ ಕಾನೂನು
    ಕೈಗೆ ತೆಗೆದುಕೊಳ್ಳಬಾರದು
  • ಲೋಕಸಭಾ ಚುನಾವಣೆ ನೀತಿ ಸಂಹಿತೆ
    ಜಾರಿಯಲ್ಲಿರುವುದರಿಂದ ಯಾರೂ
    ಉಲ್ಲಂಘಿಸಬಾರದು

ಇತರೆ ಸೂಚನೆಗಳು: 01. ಜಾತ್ರಾ ಸಮಯದಲ್ಲಿ ನಗರದಲ್ಲಿ ಅಕ್ರಮ ಮದ್ಯ ಮಾರಾಟ, ಕಾನೂನು ಬಾಹಿರಚಟುವಟಿಕೆಗಳಲ್ಲಿ ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು.02. ರೌಡಿ ಮತೀಯ ಗೂಂಡ ಮತ್ತು ಎಂಬಿಗಳು ಜಾತ್ರೆ ಸಮಯದಲ್ಲಿ ಕಾನೂನು ಸುವ್ಯವಸ್ಥೆಗೆ
ದಕ್ಕೆ ಉಂಟು ಮಾಡಲು ಪ್ರಯತ್ನಿಸಿದ್ದಲ್ಲಿ ಕಟ್ಟು ನಿಟ್ಟಿನ ಕಾನೂನು ಕ್ರಮ ವಹಿಸಲಾಗುವುದು.03. ಜಾತ್ರೆಗೆ ಆಗಮಿಸುವ ಮಹಿಳೆಯರಿಗೆ & ಮಕ್ಕಳಿಗೆ ಚೂಡಾಯಿಸುವುದು ಮತ್ತು ಮದ್ಯ ಸೇವನೆಮಾಡಿ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುವುದು ಕಂಡು ಬಂದಲ್ಲಿ ಅಂತವರ ವಿರುದ್ಧಕಟ್ಟು ನಿಟ್ಟಿನ ಕಾನೂನು ಕ್ರಮ ವಹಿಸಲಾಗುವುದು.04. ಜಾತ್ರೆ ಸಂಬಂಧ ಹಾಗೂ ಕಾನೂನು ಸುವ್ಯವಸ್ಥೆ ಗೆ ದಕ್ಕೆ ಬರುವಂತಹ ಪ್ರಚೋಧನಕಾರಿ ಪೋಸ್ಟರ್ ಗಳನ್ನು ಹಾಕುವುದಾಗಲೀ, ಸುಳ್ಳು ಸುದ್ದಿ-ಪ್ರಚೋದನಕಾರಿ ಸಂಧೇಶಗಳನ್ನು ಹರಿಬಿಡುವುದಾಗಲಿ ಹಾಗೂ ಯಾವುದೇ
ಧರ್ಮದ ವಿರುದ್ಧ ವ್ಯಕ್ತಿಯ ವಿರುದ್ಧ ಅವಹೇಳನಕಾರಿ‌ಪೋಸ್ಟ್‌ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದು/ ರವಾನಿಸುವುದು ಕಂಡು ಬಂದಲ್ಲಿ ಅಂತವರ ವಿರುದ್ಧ ಕಟ್ಟು ನಿಟ್ಟಿನ ಕಾನೂನು ಕ್ರಮ ವಹಿಸಲಾಗುವುದು.05. ಜಾತ್ರೆ ಸಂಬಂಧ ಸಾರ್ವಜನಿಕವಾಗಿ ಪ್ರಾಣಿ ಬಲಿ ಮಾಡಲು ಪ್ರಯತ್ನಿಸಿದಲ್ಲಿಅಂತವರ ವಿರುದ್ಧ ಕಟ್ಟು ನಿಟ್ಟಿನ ಕಾನೂನು ಕ್ರಮ ವಹಿಸಲಾಗುವುದು.

 

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top