ದಾವಣಗೆರೆ: ರೋಗಿಗಳಿಗೆ ಅಗತ್ಯ ಸೇವೆ ನೀಡುವಲ್ಲಿ ವಿಫಲವಾದ್ರೆ ಸಸ್ಪೆಂಡ್ ಮಾಡುವುದಾಗಿ ಜಿಲ್ಲಾಸ್ಪತ್ರೆಯ ಡಿಎಸ್ಗೆ ಉಸ್ತುವಾರಿ ಸಚಿವ ಭೈರತಿ ಬಸವರಾಜಬಖಡಕ್ ವಾರ್ನಿಂಗ್ ನೀಡಿದರು.
ದಾವಣಗೆರೆ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಉಸ್ತುವಾರಿ ಸಚಿವ ಬೈರತಿ ಬಸವರಾಜ್,ಡಿಎಸ್ ಡಾ.ಜಯಪ್ರಕಾಶ್ಗೆ ತರಾಟೆಗೆ ತೆಗೆದುಕೊಂಡರು.
ವೇಟಿಂಗ್ ಹಾಲ್ನಲ್ಲಿ ಕಾಯುತ್ತಿದ್ದ ತುರ್ತು ವೈದ್ಯಕೀಯ ಸೇವೆ ಅಗತ್ಯವಿರುವ ರೋಗಿಗಳನ್ನು ಕಂಡು ವೈದ್ಯರ ವಿರುದ್ಧ ಕಿಡಿಕಾರಿದರು. ಒಬ್ಬರಿಗೆ ತೀವ್ರ ಜಾಂಡೀಸ್, ಮತ್ತೊಬ್ಬರಿಗೆ ಕಾಲು ನೋವಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದೆ. ಹಲವು ಗಂಟೆಗಳಿಂದ ಕಾಯುತ್ತಿದ್ದರೂ ಚಿಕಿತ್ಸೆ ದೊರೆತಿರಲಿಲ್ಲ.
ತುರ್ತು ಚಿಕಿತ್ಸೆ ಬೇಕಿರುವ ರೋಗಿಗಳನ್ನು ಏಕೆ ಕಾಯಿಸುತ್ತೀರಿ? ಜಿಲ್ಲಾಸ್ಪತ್ರೆಗೆ ಬರೋರು ಬಡವರು. ಯಾರೂ ಬಂದು ಕಾಯುವಂತಾಗಬಾರದು. ಅವರಿಗೆ ವೈದ್ಯಕೀಯ ಸೇವೆಯಲ್ಲಿ ಲೋಪ ಆಗಬಾರದು. ತುರ್ತು ಆದ್ಯತೆ ಇರುವವರಿಗೆ ಮೊದಲು ಚಿಕಿತ್ಸೆ ಸಿಗಬೇಕು. ಇಂತಹ ಪ್ರಕರಣ ಮರುಕಳುಸಿದ್ರೆ ಸಸ್ಪೆಂಡ್ ಮಾಡ್ತೇನೆ ಎಂದರು.



