Connect with us

Dvgsuddi Kannada | online news portal | Kannada news online

ದಾವಣಗೆರೆ: ವೈದ್ಯಾಧಿಕಾರಿಗೆ ಸಸ್ಪೆಂಡ್ ವಾರ್ನಿಂಗ್ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ

ದಾವಣಗೆರೆ

ದಾವಣಗೆರೆ: ವೈದ್ಯಾಧಿಕಾರಿಗೆ ಸಸ್ಪೆಂಡ್ ವಾರ್ನಿಂಗ್ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ

ದಾವಣಗೆರೆ: ರೋಗಿಗಳಿಗೆ ಅಗತ್ಯ ಸೇವೆ ನೀಡುವಲ್ಲಿ ವಿಫಲವಾದ್ರೆ ಸಸ್ಪೆಂಡ್‌ ಮಾಡುವುದಾಗಿ ಜಿಲ್ಲಾಸ್ಪತ್ರೆಯ ಡಿಎಸ್‌ಗೆ ಉಸ್ತುವಾರಿ ಸಚಿವ ಭೈರತಿ ಬಸವರಾಜಬಖಡಕ್‌ ವಾರ್ನಿಂಗ್ ನೀಡಿದರು.

ದಾವಣಗೆರೆ ಜಿಲ್ಲಾಸ್ಪತ್ರೆಗೆ ದಿಢೀರ್‌ ಭೇಟಿ ನೀಡಿದ ಉಸ್ತುವಾರಿ ಸಚಿವ ಬೈರತಿ ಬಸವರಾಜ್‌,ಡಿಎಸ್‌ ಡಾ.ಜಯಪ್ರಕಾಶ್‌ಗೆ ತರಾಟೆಗೆ ತೆಗೆದುಕೊಂಡರು.

ವೇಟಿಂಗ್‌ ಹಾಲ್‌ನಲ್ಲಿ ಕಾಯುತ್ತಿದ್ದ ತುರ್ತು ವೈದ್ಯಕೀಯ ಸೇವೆ ಅಗತ್ಯವಿರುವ ರೋಗಿಗಳನ್ನು ಕಂಡು ವೈದ್ಯರ ವಿರುದ್ಧ ಕಿಡಿಕಾರಿದರು. ಒಬ್ಬರಿಗೆ ತೀವ್ರ ಜಾಂಡೀಸ್‌, ಮತ್ತೊಬ್ಬರಿಗೆ ಕಾಲು ನೋವಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದೆ. ಹಲವು ಗಂಟೆಗಳಿಂದ ಕಾಯುತ್ತಿದ್ದರೂ ಚಿಕಿತ್ಸೆ ದೊರೆತಿರಲಿಲ್ಲ.

ತುರ್ತು ಚಿಕಿತ್ಸೆ ಬೇಕಿರುವ ರೋಗಿಗಳನ್ನು ಏಕೆ ಕಾಯಿಸುತ್ತೀರಿ? ಜಿಲ್ಲಾಸ್ಪತ್ರೆಗೆ ಬರೋರು ಬಡವರು. ಯಾರೂ ಬಂದು ಕಾಯುವಂತಾಗಬಾರದು. ಅವರಿಗೆ ವೈದ್ಯಕೀಯ ಸೇವೆಯಲ್ಲಿ ಲೋಪ ಆಗಬಾರದು. ತುರ್ತು ಆದ್ಯತೆ ಇರುವವರಿಗೆ ಮೊದಲು ಚಿಕಿತ್ಸೆ ಸಿಗಬೇಕು. ಇಂತಹ ಪ್ರಕರಣ ಮರುಕಳುಸಿದ್ರೆ ಸಸ್ಪೆಂಡ್‌ ಮಾಡ್ತೇನೆ ಎಂದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top