Connect with us

Dvgsuddi Kannada | online news portal | Kannada news online

ದಾವಣಗೆರೆ: ತಂದೆ ಸಾವಿಗೆ ಮನನೊಂದು ಮಗ ಆತ್ಮಹತ್ಯೆ

ದಾವಣಗೆರೆ

ದಾವಣಗೆರೆ: ತಂದೆ ಸಾವಿಗೆ ಮನನೊಂದು ಮಗ ಆತ್ಮಹತ್ಯೆ

ದಾವಣಗೆರೆ: ತಂದೆ ಸಾವಿನಿಂದ ಮನನೊಂದು ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಚೀಲಾಪುರ ಗ್ರಾಮದಲ್ಲಿ ನಡೆದಿದೆ.

ಚೀಲಾಪುರ ಗ್ರಾಮದ ಶಿವಕುಮಾರ (32)
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಶಿವಕುಮಾರಗೆ ಎಡಗೈ ಇಲ್ಲದೇ ವಿಕಲಚೇತನನಾಗಿದ್ದು, ಈತನ ತಂದೆ ಚಂದ್ರನಾಯ್ಕ (65 ವರ್ಷ) ವಯೋಸಹಜವಾಗಿ ಸಾವನ್ನಪ್ಪಿದ್ದರು. ತಂದೆ ಸಾವಿನಿಂದ ಶಿವಕುಮಾರ ತೀವ್ರವಾಗಿ ಮನನೊಂದಿದ್ದನು. ತನಗೆ ಆಸರೆಯಾಗಿದ್ದ ತಂದೆ ಅಗಲಿಕೆ ನಂತರ ಮಾನಸಿಕವಾಗಿ ಕುಗ್ಗಿದ್ದನು. ಇದರಿಂದ ಮನೆಯಲ್ಲಿ ವಿಷ ಸೇವಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top