Connect with us

Dvgsuddi Kannada | online news portal | Kannada news online

ದಾವಣಗೆರೆ: ಕೇವಲ ಒಂದೂವರೆ ಗಂಟೆ ಅಂತರದಲ್ಲಿ ಸಾವನ್ನಪ್ಪಿದ ಅಜ್ಜ-ಅಜ್ಜಿ; ಸಾವಿನಲ್ಲೂ ಒಂದಾದ ವೃದ್ಧ ದಂಪತಿ

ಚನ್ನಗಿರಿ

ದಾವಣಗೆರೆ: ಕೇವಲ ಒಂದೂವರೆ ಗಂಟೆ ಅಂತರದಲ್ಲಿ ಸಾವನ್ನಪ್ಪಿದ ಅಜ್ಜ-ಅಜ್ಜಿ; ಸಾವಿನಲ್ಲೂ ಒಂದಾದ ವೃದ್ಧ ದಂಪತಿ

ದಾವಣಗೆರೆ: ಸಾವು ಎಂಬ ವಿಧಿ ಯಾರಿಗೆ..?ಯಾವಾಗ..? ಬರುತ್ತೇ ಅಂತಾ ನಿರೀಕ್ಷೆ ಮಾಡಲು ಸಾಧ್ಯವಿಲ್ಲ…! ಅದರಲ್ಲೂ ದಂಪತಿಗಳು ಒಂದೇ ದಿನ ಸಹಜವಾಗಿ ಸಾವನ್ನಪ್ಪುವುದು, ಅಪರೂಪದಲ್ಲಿಯೇ ಅಪರೂಪ.‌ ಇಂತಹದೊಂದು ಘಟನೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ ಸಮೀಪದ ಚಿರಡೋಣಿಯಲ್ಲಿ ನಡೆದಿದೆ.

ಚಿರಡೋಣಿಯ ರೈತ ಹನುಮಂತಪ್ಪ (98) ಮತ್ತು ಅವರ ಪತ್ನಿ ಜಯಮ್ಮ (82) ಅವರು ನಿನ್ನೆ (ಆ.07 ) ಕೇವಲ ಒಂದೂವರೆ ಗಂಟೆಯ ಅವಧಿಯಲ್ಲಿ ನಿಧನರಾಗಿದ್ದಾರೆ. ಈ ವೃದ್ಧ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. ನಿನ್ನೆ ಬೆಳಿಗ್ಗೆ 8.30ರಲ್ಲಿ ಜಯಮ್ಮ ವಯೋಸಹಜ ಕಾಯಿಲೆಯಿಂದ ನಿಧನರಾದರು. ಪತ್ನಿಯ ಅಗಲಿಕೆ ವಿಷಯ‌ ತಿಳಿದು ಬೆಳಿಗ್ಗೆ 10ಕ್ಕೆ ಹನುಮಂತಪ್ಪ ಹೃದಯಾಘಾತದಿಂದ ನಿಧನರಾಗಿದ್ದಾರೆ. ದಂಪತಿಗೆ ನಾಲ್ವರು ಪುತ್ರಿಯರು, ಒಬ್ಬ ಪುತ್ರರಿದ್ದರು. ದಂಪತಿಯ ಅಂತ್ಯಕ್ರಿಯೆ ನಿನ್ನೆಯೇ ನಡೆದಿದೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಚನ್ನಗಿರಿ

To Top