ದಾವಣಗೆರೆ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇಂದು(ಸೆ. 23) ಹಳೇಬಾತಿಯ ಸರ್ಕಾರಿ ಶಾಲೆಗೆ ಭೇಟಿ ನೀಡಿದರು. ಶಾಲಾ ಸುತ್ತ-ಮುತ್ತ ಜಾಲಿ ಗಿಡಗಳು ಬೆಳೆದಿರುವುದನ್ನು ಕಂಡು. ಕೂಡಲೇ ಶ್ವಚ್ಛಗೊಳಿಸಿ ಕಾಂಪೌಂಡ್ ನಿರ್ಮಿಸುವಂತೆ ತಹಶೀಲ್ದಾರ್ ಗೆ ಸೂಚಿಸಿದರು.
ಹಳೇಬಾತಿ ಗ್ರಾಮದ ಎಸ್.ಡಿ.ಎಂ.ಸಿ ಸಮಿತಿಯವರು ನಮ್ಮೂರ ಶಾಲೆ ಶಾಲೆಯ ಒಳಗೆ ಹಾವುಗಳು ಬರುತ್ತಿವೆ ಎಂದು ಲೋಕಸಭಾ ಸದಸ್ಯರಿಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಇಂದು ಡಿಸಿ ಶಾಲೆಗೆ ಭೇಟಿನೀಡಿದ್ದರು. ಈ ವೇಳೆ ಮಕ್ಕಳೂಂದಿಗೆ ಚರ್ಚಿಸಿ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಪರಿಶೀಲಿಸಿದರು.
ಶಿಕ್ಷಕರು ಪ್ರಸ್ತುತ ವಿದ್ಯಾಮಾನಕ್ಕೆ ತಕ್ಕಂತೆ ಮಕ್ಕಳಿಗೆ ಕನ್ನಡ ಶಿಕ್ಷಣ ಜತೆ ಇಂಗ್ಲೀಷ್ ಶಿಕ್ಷಣದ ಜ್ಞಾನ, ಬೋಧನೆ ಹಾಗೂ ವ್ಯಾಕರಣ ಕಲಿಕೆ ಆದ್ಯತೆ ನೀಡಬೇಕು ಎಂದರು. ಶಾಲಾ ಕಾಂಪೌಂಡ್ ಅಳತೆ ಮತ್ತು ದುರಸ್ಥಿ ಕಾರ್ಯ ತಕ್ಷಣ ಹಮ್ಮಿಕೊಳ್ಳಲು ಜಿಲ್ಲಾಧಿಕಾರಿಗಳು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆಯಲ್ಲಿ ಡಿಡಿಪಿಐ ಪರಮೇಶ್ವರಪ್ಪ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರ್, ಹಾಗೂ ಶಾಲೆಯ ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು.



