Connect with us

Dvgsuddi Kannada | online news portal | Kannada news online

ಡಿ. 12ರಂದು ಎಂ. ಜಯಣ್ಣ ಒಂದು ನೆನಪು ಕಾರ್ಯಕ್ರಮ

ದಾವಣಗೆರೆ

ಡಿ. 12ರಂದು ಎಂ. ಜಯಣ್ಣ ಒಂದು ನೆನಪು ಕಾರ್ಯಕ್ರಮ

ದಾವಣಗೆರೆ: ಮಾದಿಗ ನೌಕರರ ಬಳಗದ ವತಿಯಿಂದ ಡಿ.12 ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ ದಲಿತ ಹೋರಾಟಗಾರ ದಿ.ಎಂ ಜಯಣ್ಣ ಒಂದು ನೆನಪು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾದಿಗ ನೌಕರರ ಬಳಗದ ಅಧ್ಯಕ್ಷ ಸಿ.ನಾಗರಾಜಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,   ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮ  ಉದ್ಘಾಟಿಸಲಿದ್ದು, ದಿ.ಎಂ ಜಯಣ್ಣ ಅವರ ಭಾವಚಿತ್ರಕ್ಕೆ ಸಂಸದ ಜಿ.ಎಂ ಸಿದ್ದೇಶ್ವರ್ ಮಾಲಾರ್ಪಣೆ ಮಾಡಲಿದ್ದಾರೆ. ಬಳಗದ ಅಧ್ಯಕ್ಷ ನಾಗರಾಜಪ್ಪ ಸಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಎ.ನಾರಾಯಣಸ್ವಾಮಿ, ರಾಜ್ಯಸಭಾ ಸದಸ್ಯ ಎಲ್ ಹನುಮಂತಯ್ಯ,ಮಾಜಿ ಸಚಿವ ಹೆಚ್ ಆಂಜನೇಯ, ಶಾಸಕ ಪ್ರೊ.ಎನ್ ಲಿಂಗಣ್ಣ ಮತ್ತಿತರರು ಆಗಮಿಸಲಿದ್ದಾರೆ ಎಂದರು.

ದಿ.ಜಯಣ್ಣನವರು ತಮ್ಮ ಬದುಕಿನುದ್ದಕ್ಕೂ ಅಂಬೇಡ್ಕರ್ ಅವರ ತತ್ವಸಿದ್ದಾಂತಕ್ಕೆ ನಿಷ್ಠರಾಗಿದ್ದರು. ಸದಾ ಹೋರಾಟದಲ್ಲಿಯೇ ಜೀವನ ಸಾಗಿಸಿದರು.ಜಯಣ್ಣನವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ.ಇಂತಹ ಅಪರೂಪದ ವ್ಯಕ್ತಿಗೆ ಡಿ.12 ರಂದು ನುಡಿನಮನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top