ದಾವಣಗೆರೆ; ಕಲ್ಲೇಶ್ವರ ಮಿಲ್ ನ ಫಾರ್ಮ್ ಹೌಸ್ನಲ್ಲಿ ವನ್ಯಜೀವಿಗಳು ಪತ್ತೆ ಪ್ರಕರಣ ಹಿನ್ನೆಲೆ ಮಾಜಿ ಸಚಿವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮತ್ತೆ ಜ.5ಕ್ಕೆ ಮುಂದೂಡಿದೆ.
ಮಾಜಿ ಸಚಿವರಿಗೆ ಸೇರಿದ ಫಾರ್ಮ್ ಹೌಸ್ನಲ್ಲಿ ವನ್ಯಜೀವಿಗಳು ಪತ್ತೆಯಾಗಿದ್ದವು. ಈ ಪ್ರಕರಣ ಹಿನ್ನೆಲೆ ನಿರೀಕ್ಷಣಾ ಜಾಮೀನಿಗೆ ನಾಲ್ಕು ಆರೋಪಿಗಳು ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಮಾಜಿ ಸಚಿವರ ಅರ್ಜಿ ವಿಚಾರಣೆ ನಡೆಸಿದ ದಾವಣಗೆರೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ವಾದ-ಪ್ರತಿವಾದ ಆಲಿಸಿ ಜನವರಿ 5ಕ್ಕೆ ವಿಚಾರಣೆ ಮುಂದೂಡಿದೆ. ಮಾಜಿ ಸಚಿವರ ಪರ ಹಿರಿಯ ವಕೀಲ ಪ್ರಕಾಶ್ ಪಾಟೀಲ್ ನಿರೀಕ್ಷಣಾ ಜಾಮೀನಿಗೆ ವಾದ ಮಂಡಿಸಿದರು. ಸರ್ಕಾರಿ ವಕೀಲರು, ಇದು ವನ್ಯ ಜೀವಿಗಳ ಪ್ರಕರಣವಾದ ಹಿನ್ನೆಲೆ ಕಾರಣ ಮಾಜಿ ಸಚಿವರಿಗೆ ಜಾಮೀನು ನೀಡದಂತೆ ಆಗ್ರಹಿಸಿದರು.
ಈ ಪ್ರಕರಣದಲ್ಲಿ ಎ1 ಅರೋಪಿ ಸಂಪಣ್ಣ, ಎ2 ಆರೋಪಿ ಕರಿಬಸವಯ್ಯ, ಎ3 ಆರೋಪಿ ಸೆಂಥಿಲ್ ಹಾಗೂ ಮಿಲ್ ಜಾಗದ ಮಾಲೀಕರಾದ ಮಾಜಿ ಸಚಿವ ಎ4 ಆರೋಪಿಯಾಗಿದ್ದಾರೆ.



