ದಾವಣಗೆರೆ: ನಗರದ ಬಂಬೂಬಜಾರ್ ನಲ್ಲಿರುವ ಮಾಜಿ ಸಚಿವ ಮಲ್ಲಿಕಾರ್ಜುನ್ ಮಾಲೀಕತ್ವದ ಕಲ್ಲೇಶ್ವರ ಮಿಲ್ ನಲ್ಲಿ ಪತ್ತೆಯಾದ ವನ್ಯ ಜೀವಿ ಪ್ರಕರಣಕ್ಕೆ ಸಬಂಧಿಸಿದಂತೆ ಆರೋಪಿ ಪಟ್ಟಿಯಲ್ಲಿರುವ ಇಬ್ಬರು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯನ್ನು 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಯಲ ನಾಳೆ (ಡಿ.31) ವಿಚಾರಣೆ ನಡೆಸಲಿದೆ.
ಈ ಪ್ರಕರಣದಲ್ಲಿ ಮೊದಲ ಆರೋಪಿಯಾಗಿ ಸಂಪಣ್ಣ ಮುತಾಲಿಕ್ ಹಾಗೂ ಎರಡನೇ ಆರೋಪಿ ಜಿ.ಎಂ. ಕರಿಬಸಯ್ಯ ವಕೀಲರ ಮೂಲಕ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಮೂರನೇ ಆರೋಪಿಯಾಗಿ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ ಸೆಂದಿಲ್ ಕುಮಾರ್ ಆಗಿದ್ದು, ನಾಲ್ಕನೇ ಆರೋಪಿಯಾಗಿ ಮಿಲ್ ಮಾಲೀಕರಾಗಿದ್ದಾರೆ.



