ದಾವಣಗೆರೆ: ನಗರ ನಿವೃತ್ತ ನೌಕರರ ವಿವಿಧೋದ್ದೇಶ ಸಹಕಾರ ಸಂಘದ ಚುನಾವಣೆ ಡಿಸೆಂಬರ್ 10 ರಂದು ಸಂಘದ ಕಚೇರಿಯಲ್ಲಿ ನಡೆಯಲಿದೆ.
ಇಂದು ದಿನ ಎಸ್ ಗುರುಮೂರ್ತಿ ಮತ್ತು ಎ ಆರ್ ಉಜ್ಜನಪ್ಪ ಇವರ ನೇತೃತ್ವದಲ್ಲಿ 13 ಜನರು ತಮ್ಮ ನಾಮಪತ್ರ ಸಲ್ಲಿಸಿದರು ಈ ತಂಡದಲ್ಲಿ ಎಸ್ ಗುರುಮೂರ್ತಿ,ಜಯದೇವಯ್ಯ ಕೆ ಎಂ , ಎನ್ ಜಿ ಬಸವರಾಜ್, ಮಲ್ಲಿಕಾರ್ಜುನಯ್ಯ ಸಿ ಎಂ, ಗೋವಿಂದ ರೆಡ್ಡಿ ಡಿ, ಚರಂತಿಮಠ ಎಸ್ ಎಂ , ರುದ್ರೇಗೌಡ ಕೆ ಜಿ , ಯಮುನಪ್ಪ ಹೆಚ್ ಕೆ , ಹಾಲಪ್ಪ ಕೆ , ಕೃಷ್ಣಪ್ಪ ಎಸ್ , ದೇವಾಚಾರ್ ಎಂ ಡಿ, ಅಂಬುಜಾಕ್ಷಮ್ಮ ಟಿ ಎಂ ಮತ್ತು ಪುಷ್ಪಲತಾ ಟಿ ಕೆ ಪಿ ಇವರು ತಮ್ಮ ಅನೇಕ ಬೆಂಬಲಿಗರೊಂದಿಗೆ ಆಗಮಿಸಿ ಚುನಾವಣಾಧಿಕಾರಿ ಶ್ರೀ ಜಗದೀಶ್ ಸಿ ಜಿ ಇವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಎ ಆರ್ ಉಜ್ಜನಪ್ಪ ಮತ್ತು ಗುರುಮೂರ್ತಿ ಇವರು ಮಾತನಾಡಿ ಎಲ್ಲರೂ ಒಟ್ಟಾಗಿ ಚುನಾವಣೆಯನ್ನು ನಡೆಸಿ ಎಲ್ಲರ ಗೆಲುವಿಗೆ ಶ್ರಮಿಸೋಣ ಮತ್ತು ಸ್ವಚ್ಛ ಪಾರದರ್ಶಕ ಆಡಳಿತ ನೀಡಲು ಕಟಿಭದ್ದವಾಗಿರೋಣ ಎಂದು ತಿಳಿಸಿದರು. ಜಯದೇವಯ್ಯ ಎಲ್ಲರನ್ನು ವಂದಿಸಿದರು.



