ದಾವಣಗೆರೆ: ಗಾನ ಸೌರಭ ಸಂಗೀತ ವಿದ್ಯಾಲಯದ ದಶಮಾನೋತ್ಸವ ಹಿನ್ನಲೆ ಸಂಗೀತ ಸ್ಪರ್ಧೆ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾಲಯದ ಪ್ರಾಂಶುಪಾಲರಾದ ಶುಭ, ನವೆಂಬರ್ 20ರಂದು ಬೆಳಿಗ್ಗೆ 9ಗಂಟೆಗೆ ನಗರದ ಎ.ವಿ. ಕಮಲಮ್ಮ ಕಾಲೇಜಿನಲ್ಲಿ ಸ್ಪರ್ಧೆ ನಡೆಯಲಿದೆ.
ಕಿರಿಯ, ಮಧ್ಯಂತರ ಹಾಗೂ ಹಿರಿಯರ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ದೇವರ ನಾಮ, ಭಾವಗೀತೆ, ದೇಶಭಕ್ತಿ ಗೀತೆ, ಜಾನಪದ ಗೀತೆ,ಭಜನೆ, ವಚನ, ಗಮಕ, ಭಗವದ್ಗೀತೆ, ಶಾಸ್ತ್ರೀಯ ಸಂಗೀತದಲ್ಲಿ ಅಂತ್ಯಾಕ್ಷರಿ ಹಾಗೂ ವೀಣೆ, ವೈಲಿನ್, ಕೊಳಲು, ಕೀಬೊರ್ಡ್, ವಾದ್ಯಗಳನ್ನು ನುಡಿಸುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ: 9611212596,9916647988, 988050037 ಸಂಪರ್ಕಿಸುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸ್ವರೂಪ ಬದ್ರಿನಾಥ್, ಸುಮನಾ ರಾಯಸಂ, ರಶ್ಮಿ ಭರತ್, ಚಂದ್ರಿಕಾ ಶ್ರೀಹರ್ಷ ಉಪಸ್ಥಿತರಿದ್ದರು.



