Connect with us

Dvgsuddi Kannada | online news portal | Kannada news online

ದಾವಣಗೆರೆ: ಸಂತೇಬೆನ್ನೂರಿನ 2 ರೂಪಾಯಿ ಡಾಕ್ಟ್ರು ಬಸವಂತಪ್ಪಗೆ ರಾಜ್ಯೋತ್ಸವ ಪ್ರಶಸ್ತಿ

FB IMG 1667176921952

ಚನ್ನಗಿರಿ

ದಾವಣಗೆರೆ: ಸಂತೇಬೆನ್ನೂರಿನ 2 ರೂಪಾಯಿ ಡಾಕ್ಟ್ರು ಬಸವಂತಪ್ಪಗೆ ರಾಜ್ಯೋತ್ಸವ ಪ್ರಶಸ್ತಿ

ದಾವಣಗೆರೆ: ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರಿನ 2 ರೂಪಾಯಿ ಡಾಕ್ಟ್ರು ಎಂದೇ ಖ್ಯಾತಿಗಳಿಸಿದ್ದ ಸಿದ್ಧೇಶ್ವರ ಕ್ಲಿನಿಕ್‌ನ ಡಾ. ಎಂ. ಬಸವಂತಪ್ಪ ಅವರು ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬಸವಂತಪ್ಪ ಅವರು ತಂದೆಯ ಮಾತನ್ನು ಆದರ್ಶವಾಗಿ ತೆಗೆದುಕೊಂಡು ಬಡವರಿಗೆ ಅತಿ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಿ ಎರಡು ರೂಪಾಯಿ ಡಾಕ್ಟ್ರು ಖ್ಯಾತಿ ಪಡೆದಿದ್ದಾರೆ.

1951ರಲ್ಲಿ ಸಂತೇಬೆನ್ನೂರಿನ ಸಿದ್ದಪ್ಪ-ಹಾಲಮ್ಮ ದಂಪತಿಯ ಎರಡನೇ ಪುತ್ರರಾಗಿ ಜನಿಸಿದ ಬಸವಂತಪ್ಪ ಸಿರಿಗೆರೆ ಯಲ್ಲಿ ಎಸ್ಸೆಸ್ಸೆಲ್ಸಿ, ಶಿವಮೊಗ್ಗ ಸಹ್ಯಾದ್ರಿ ಪಿಯು ಕಾಲೇಜಿನಲ್ಲಿ ಪಿಯುಸಿ ಹಾಗೂ ಮೈಸೂರಿನ ಸರ್ಕಾರಿ ಮೆಡಿಕಲ್‌ ಕಾಲೇಜಿನಲ್ಲಿ ಎಂಬಿಬಿಎಸ್‌ ಪದವಿ ಪಡೆದಿದ್ದಾರೆ. ನಂತರ 1987ರಲ್ಲಿ ಸಂತೇಬೆನ್ನೂರಿನಲ್ಲಿ ಸಿದ್ದೇಶ್ವರ ಕ್ಲಿನಿಕ್‌ ಆರಂಭಿಸಿದ್ದರು.ಬಡವರಿಗೆ ಹೊರೆಯಾಗಬೇಡ. ಅವರ ಆರೋಗ್ಯ ಕಾಪಾಡುವುದು ಎಂದು ತಂದೆ ಮಾತು ಪಾಲಿಸಿಕೊಂಡು ಬಂದಿದ್ದಾರೆ. 18 ವರ್ಷಗಳ ಕಾಲ ಕೇವಲ 2 ರೂ.ಗೆ ವೈದ್ಯ ಸೇವೆ ನೀಡಿ ಸಂತೇವೆನ್ನೂರು ಸುತ್ತಮುತ್ತ ಪ್ರಸಿದ್ಧಿಯನ್ನು ಪಡೆದಿದ್ದಾರೆ‌.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಚನ್ನಗಿರಿ

To Top