ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಆಲೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ, ಹಾಗೂ ಕೆರೆಬಿಳಚಿಯ ಪ್ರಗತಿ ವಿವಿದೋದ್ದೇಶ ಸಹಕಾರ ಸಂಘ ನಿಯಮಿತ ಸಹಕಾರ ಸಂಘಗಳು ನೋಂದಣಿಯನ್ನು ರದ್ದುಪಡಿಸಲಾಗಿದೆ.
ಈ ಸಹಕಾರ ಸಂಘಗಳಿಗೆ ಸಮಾಪನಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಚನ್ನಗಿರಿ ನೇಮಕಗೊಂಡಿದ್ದು, ಈ ಸಹಕಾರ ಸಂಘಗಳಿಗೆ ಸಂಬಂಧಪಟ್ಟವರು ಯಾರೇ ಇದಲ್ಲಿ ವಿಜಯ ವಿ. ಸಹಕಾರ ಅಭಿವೃದ್ದಿ ಅಧಿಕಾರಿ, ಸಹಕಾರ ಅಭಿವೃದ್ದಿ ಅಧಿಕಾರಿ ಕಾರ್ಯಾಲಯ, ತುಮ್ಕೋಸ್ ಕಟ್ಟಡ, ಬಸ್ ನಿಲ್ದಾಣದ ಎದುರು, ಚನ್ನಗಿರಿ ಇಲ್ಲಿ ಭೇಟಿ ನೀಡಬಹುದು. ಈ ಪತ್ರಿಕಾ ಪ್ರಕಟಣೆ ಹೊರಡಿಸಿದ 15 ದಿನಗಳೊಳಗಾಗಿ ಸಂಬಂಧಪಟ್ಟವರು ಬರದೇ ಹೋದಲ್ಲಿ ಸಹಕಾರ ಸಂಘಗಳ ನೋಂದಣಿ ರದ್ದತಿ ಮಾಡಲಾಗುವುದು. ಹಾಗೂ ಮುಂದೆ ಬರುವ ಯಾವುದೇ ಹೊಣೆಗಾರಿಕೆಗಳಿಗೆ ಸಮಾಪನಾಧಿಕಾರಿಗಳು ಹೊಣಿಗಾರರಾಗಿರುವುದಿಲ್ಲವೆಂದು ಸಹಕಾರ ಅಭಿವೃದ್ಧಿ ಅಧಿಕಾರಿ, ಸಹಕಾರ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.



