ದಾವಣಗೆರೆ: ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರ 55ನೇ ಹುಟ್ಟುಹಬ್ಬದ ಪ್ರಯುಕ್ತ ಜಿಲ್ಲೆಯಾದ್ಯಂತ ಎಸ್.ಎಸ್.ಎಂ. ಅಭಿಮಾನಿ ಬಳಗದ ವತಿಯಿಂದ ಬೃಹತ್ ರಕ್ತದಾನ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,
ಎಸ್.ಎಸ್.ಎಂ 55ನೇ ಹುಟ್ಟುಹಬ್ಬವನ್ನು ವಿಶೇಷ ಹಾಗೂ ವಿಶಿಷ್ಟ ರೀತಿಯಲ್ಲಿ ಆಚರಿಸುವ ದೃಷ್ಟಿಯಿಂದ ಒಂದೇ ದಿನ 5,555 ಜನ ರಕ್ತದಾನಿಗಳಿಂದ ರಕ್ತ ಸಂಗ್ರಹಿಸುವ ದಾಖಲೆಯ ಯೋಜನೆರೂಪಿಸಲಾಗಿತ್ತು. ಆದರೆ, ಒಂದೇ ದಿನ ಅಷ್ಟೊಂದು ರಕ್ತಸಂಗ್ರಹಣೆ ಶೇಖರಣೆ ವ್ಯರ್ಥವಾಗವ ದೃಷ್ಟಿಯಿಂದ ಇದು ಸಾಧ್ಯವಿಲ್ಲ ಎನ್ನುವ ವೈದ್ಯರ ಸಲಹೆ ನೀಡಿದ್ದಾರೆ. ನಾವು ಒಂದು ಯುನಿಟ್ ರಕ್ತವನ್ನೂ ಕೂಡ ವ್ಯರ್ಥ ಮಾಡಬಾರದು ಎನ್ನುವ ದೃಷ್ಟಿಯಿಂದ ದಾವಣಗೆರೆಯ ಎರಡು ರಕ್ತನಿಧಿ ಕೇಂದ್ರಗಳಾದ ಬಾಪೂಜಿ ಮತ್ತು ಎಸ್.ಎಸ್. ರಕ್ತನಿಧಿ ಕೇಂದ್ರಗಳಿಂದ ರಕ್ತದಾನ ಅಭಿಯಾನ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದರು.
ಸೆ. 11 ಭಾನುವಾರದಿಂದ ಪ್ರಾರಂಭವಾಗಿ ಸೆ. 23ರೊಳಗೆ ರೊಳಗೆ 5,555 ರಕ್ತದಾನಿಗಳ ನೋಂದಣಿ ಮಾಡುವ ಗುರಿ ಹಮ್ಮಿಕೊಳ್ಳಲಾಗಿದೆ.ಸೆ.11ರಂದು ಹೊನ್ನಾಳಿ ಹಾಗೂ ದಾವಣಗೆರೆಯ ಐ.ಎಂ.ಎ.ಹಾಲ್ ನಲ್ಲಿ ಪ್ರಾರಂಭವಾಗಲಿರುವ ಈ ಅಭಿಯಾನಕ್ಕೆ ಡಾ. ಪ್ರಭಾ ಮಲ್ಲಿಕಾರ್ಜುನ್ ಚಾಲನೆ ನೀಡುವರು. ದಾವಣಗೆರೆ ಜಿಲ್ಲೆಯಾದ್ಯಂತ ಪ್ರತೀ ಭಾನುವಾರ ರಕ್ತದಾನ ಅಭಿಯಾನ ಹಮ್ಮಿಕೊಳ್ಳಲಾಗುವುದು. ಎಸ್.ಎಸ್.ಮಲ್ಲಿಕಾರ್ಜುನ್ರವರ 55ನೇ ಹುಟ್ಟುಹಬ್ಬದ ಪ್ರಯುಕ್ತ ಬಾಪೂಜಿ ರಕ್ತ ಭಂಡಾರ ಕೇಂದ್ರದಲ್ಲಿ ಡಿಸೆಂಬರ್ 31 ರವರೆಗೂ ಅವಶ್ಯಕತೆ ಇರುವ ಬಡ ರೋಗಿಗಳಿಗೆ ಉಚಿತವಾಗಿ ರಕ್ತವನ್ನು ನೀಡಲಾಗುವುದು.
ಈ ಬೃಹತ್ ರಕ್ತದಾನ ಅಭಿಯಾನಕ್ಕೆ ಜಿಲ್ಲೆಯ ನಾಗರಿಕರು, ವಿದ್ಯಾರ್ಥಿಗಳು, ಮಹಿಳೆಯರು, ಯುವಕರ ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡುವ ಮೂಲಕ “ರಕ್ತದಾನ ಶ್ರೇಷ್ಠದಾನ” ಕಾರ್ಯಕ್ರಮದ ಭಾಗಿಯಾಗಬೇಕೆಂದರು.ಸಾರ್ವಜನಿಕರು ರಕ್ತದಾನ ಮಾಡಲು ನೋಂದಾಯಿಸಲು ಹರೀಶ್ ಕೆ.ಎಲ್. ಬಸಾಪುರ 9964070 ಬಾಪೂಜಿ ರಕ್ತನಿಧಿ ಕೇಂದ್ರ 08192-273850, ಎಸ್.ಎಸ್. ರಕ್ತನಿಧಿ ಕೇಂದ್ರ 08192-26601 ದೂರವಾಣಿಗೆ ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜೆಜೆಎಂಸಿ ಕಾಲೇಜಿನ ಪ್ರಾಂಶುಪಾಲ ಡಾ.ಮುರುಗೇಶ್, ಎಸ್ಎಸ್ ಐಎಂಎಸ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಸ್ ಪ್ರಸಾದ್,ಬಾಪೂಜಿ ಆಸ್ಪತ್ರೆಯ ನಿರ್ದೇಶಕ ಡಾ.ಕುಮಾರ್, ಫೆಥಾಲಜಿವಿಭಾಗದ ಮುಖ್ಯಸ್ಥ ಡಾ.ಶಶಿಕಲಾ ಕೃಷ್ಣಮೂರ್ತಿ,ಅಲಿಕೆ ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್, ಡಾ.ಧನ್ಯಕುಮಾರ್,ಕೆ.ಎಸ್ ಬಸವಂತಪ್ಪ,ಪರಶುರಾಮ್, ಹರೀಶ್ ಬಸಾಪುರ, ಶ್ರೀಕಾಂತ್ ಬಗಾರೆ ಇದ್ದರು.



