ದಾವಣಗೆರೆ: ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ಛೇರ್ಮನ್ ಆಗಿ ಗೌಡ್ರು ಚನ್ನಬಸಪ್ಪ ಅಧಿಕಾರಿ ಸ್ವೀಕರಿಸಿದ್ದಾರೆ. ರೆಡ್ಕ್ರಾಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಖೆಯ ನಿಕಟಪೂರ್ವ ಛೇರ್ಮನ್ ಡಾ.ಎ.ಎಂ. ಶಿವಕುಮಾರ್ ಅವರು ಗೌಡ್ರು ಚನ್ನಬಸಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಆನಂದ ಜ್ಯೋತಿ, ವೈಸ್ ಛೇರ್ಮನ್ರಾಗಿ ಡಾ. ಮಹೇಶ್ ಕರಿಯಪ್ಪ, ಖಚಾಂಚಿಯಾಗಿ ಅನಿಲ್ ಬಾರಂಗಳ್, ರಾಜ್ಯ ಸಮಿತಿ ಸದಸ್ಯರಾಗಿ ಡಿ.ಎಸ್. ಸಿದ್ದಣ್ಣ, ನಿರ್ದೇಶಕರಾಗಿ ಡಾ.ಎ.ಎಂ ಶಿವಕುಮಾರ್, ಸಿಎ ಉಮೇಶ್ ಶೆಟ್ಟಿ, ಡಿ.ಎಸ್ ಸಾಗರ್, ಮಂಜುನಾಥ್ ಹೆಚ್, ಶಿಲ್ಪಶ್ರೀ.ಎ.ಎಂ, ಮಹಮ್ಮದ್ ಇನಾಯತುಲ್ಲಾ, ಎನ್.ವಿ. ವಸಂತರಾಜ್, ಶಿವಾನಂದ ಡಿ.ಎನ್, ರವಿಕುಮಾರ್ ಎ.ಜೆ, ನಾಗರಾಜ್ ಕೆ.ಕೆ, ಶ್ರೀಕಾಂತ್ ಬಗರೆ, ನರೇಂದ್ರ ಪ್ರಕಾಶ್ ಎಂ.ಎಸ್, ಪೃಥ್ವಿರಾಜ್ ಬದಾಮಿ, ಕುಮಾರ್ ಎಂ, ಡಾ.ಧನಂಜಯಮೂರ್ತಿ ಬಿ.ವಿ, ಕೆ.ಬಿ ಕರಿಬಸಪ್ಪ, ಇವರುಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಕಚೇರಿ ವ್ಯವಸ್ಥಾಪಕ ರವೀಂದ್ರನಾಥ, ಸಿಬ್ಬಂದಿಗಳಾದ ಕೋ-ಆರ್ಡಿನೇಟರ್ ಶಿವಕುಮಾರ್, ವಿನಾಯಕ, ಜ್ಯೋತಿ, ಗಿರೀಶ್, ಶಿಲ್ಪರಾಣಿ, ಬೃಂದಾ, ಪೂಜಾ, ಉಮೇಶ್ ಹಾಗೂ ಪದ್ಮಬಾಯಿ ಉಪಸ್ಥಿತರಿದ್ದರು.



