ದಾವಣಗೆರೆ: ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ಫೆಲೋಶಿಪ್ ಪ್ರಧಾನ ಸಮಾರಂಭವನ್ನು ಆ.06 ರ ಶನಿವಾರದಂದು ಬೆ.10 ಗಂಟೆಗೆ ಸರ್ಕಾರಿ ಹೈಸ್ಕೂಲ್ ಮೈದಾನದ ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಸಮಾರಂಭದಲ್ಲಿ ಹಿರಿಯ ಕಲಾವಿದರಾದ ವಿಜಯ ಸಿಂಧೂರ, ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ ಕುಂಬಾರ, ಚಿತ್ರನಟ ಸುಚೇಂದ್ರ ಪ್ರಸಾದ್, ಜಿಲ್ಲಾ ಶಿಕ್ಷಕ ತರಬೇತಿ ಸಂಸ್ಥೆಯ ಉಪನಿರ್ದೇಶಕ ಹೆಚ್.ಕೆ ಲಿಂಗರಾಜ್, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷರಾದ ಡಿ.ಮಹೇಂದ್ರ ಅವರುಗಳು ಅಭಿನಂದನ ನುಡಿಗಳನ್ನಾಡುವರು.
ಕರ್ನಾಟಕ ಲಲಿತಕಲಾ ಅಕಾಡೆಮಿ ರಿಜಿಸ್ಟ್ರಾರ್ ಆರ್.ಚಂದ್ರಶೇಖರ್, ಸದಸ್ಯ ಸಂಚಾಲಕ ನರಸಿಂಹಮೂರ್ತಿ ಎಂ.ಎನ್ ಹಾಗೂ ಪಿ.ಎಸ್ ಪುಂಚಿತ್ತಾಯ ಕಾಸರಗೋಡು, ಪ್ರೊ.ವಿ.ಜಿ ಅಂದಾನಿ ಕಲಬುರ್ಗಿ, ಹೆಚ್.ಹೆಚ್ ಮ್ಯಾದಾರ್ ರಾಯಚೂರು, ಎನ್.ಆರ್ ನಾಯ್ಕರ್ ಧಾರವಾಡ, ಪ್ರಭು ಹರಸೂರು ತುಮಕೂರು, ಶ್ರೀ ಹರಿ ಮೈಸೂರು ಇವರು ಭಾಗವಹಿಸುವರೆಂದು ಪ್ರಕಟಣೆ ತಿಳಿಸಿದೆ.



