ದಾವಣಗೆರೆ: ದಿ. ಬಸಮ್ಮ, ವೀರಬಸಪ್ಪ ಮಾಗಿ ಕುಟುಂಬದ ವತಿಯಿಂದ ಧರ್ಮಸ್ಥಳ ಮಂಜುನಾಥ ಸನ್ನಿಧಿಗೆ ದ್ವೀತಿಯ ವರ್ಷದ ಒಂದು ಲೋಡ್ ಅಕ್ಕಿಯನ್ನು ವಿತರಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಜಯಪ್ರಕಾಶ್ ಮಾಗಿ, ಕೈಲಾಸ ಬಾಬು ಮಾಗಿ ಅವರು ಹಳೇ ಪೇಟೆ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಷೇಶ ಪೂಜೆ ಸಲ್ಲಿಸಿ ಧರ್ಮಸ್ಥಳಕ್ಕೆ ಭಕ್ತಿ ಸಮರ್ಪಸಿದರು. ಈ ಲಾರಿಗೆ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷ ದೇವರಮನಿ ಶಿವಕುಮಾರ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಶಿವನಗೌಡ,ಟಿ.ಪಾಟೀಲ, ಟಿಂಕರ್ ಮಂಜಣ್ಣ, ಬಿ.ಪಿ.ಎಂ ಜಗದೀಶ್, BPM ಮಂಜುನಾಥ್, ವಿನಾಯಕ ಬ್ಯಾಡಗಿ, ಜಯರಾಜ್ ಮೇಟಿ, ಪ್ರಕಾಶ್ ಮೇಟಿ, ಎಂ. ವೈ. ಆನಂದ, ಸಂಗಮೇಶ ಗದಗ, ಅಶೋಕ ಇಂಜಿನಿಯರ್, ಆರ್.ಎಂ ಪಂಚಾಕ್ಷರಿ, ಪರುಶುರಾಮ್ ಪಿ.ಎಸ್, ಮಾಳಗಿ ಸಿದ್ದೇಶ್, ಸತೀಶ್ ಹುಬ್ಬಳ್ಳಿ, ಸತೀಶ್ ಹುರ್ಣೇಕರ್, ಶರಣಗೌಡ ಬಿರಾದಾರ,ಮಲ್ಲಿಕಾರ್ಜುನ,ನಿಖಿಲ್ ಮಾಗಿ, ಹರ್ಷ ಮಾಗಿ ಮತ್ತಿತರರು ಇದ್ದರು.



