ದಾವಣಗೆರೆ: ಜಗಳೂರು ಸಹಾಯಕ ಕೃಷಿ ಅಧಿಕಾರಿಗಳ ಕಚೇರಿಯ ಮಹೀಂದ್ರ ವಾಹನಗಳನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯಿಂದ ಅನುಪಯುಕ್ತ ವಾಹನವೆಂದು ಘೋಷಿಸಿರುವುದರಿಂದ ಬಹಿರಂಗ ಹರಾಜು ಹಾಗೂ ಮೊಹರು ಬಂದ್ ಟೆಂಡರ್ ಮೂಲಕ ಎಲ್ಲಿದೆಯೋ, ಹೇಗಿದೆಯೋ ಹಾಗೇ ಜುಲೈ.27 ರಂದು ಮ.03.00 ಗಂಟೆಗೆ ಜಗಳೂರು ಸಹಾಯಕ ಕೃಷಿ ನಿರ್ದೇಶಕರ ಸಮ್ಮುಖದಲ್ಲಿ ಕಛೇರಿ ಆವರಣದಲ್ಲಿ ಹರಾಜು ಮಾಡಲಾಗುತ್ತಿದೆ.
ಆಸಕ್ತಿವುಳ್ಳವರು ಹರಾಜಿನಲ್ಲಿ ಭಾಗವಹಿಸಿ ಹೆಚ್ಚಿನ ಬಿಡ್ಡಿಗೆ ವಾಹನಗಳನ್ನು ಖರೀದಿಸಬಹುದಾಗಿದೆ.
ಹರಾಜು ಸಂಬಂಧ ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ: 8277931171/7892089675 ಯನ್ನು ಸಂಪರ್ಕಿಸಬಹುದು ಎಂದು ಜಗಳೂರು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



