ದಾವಣಗೆರೆ: ಜಿಲ್ಲಾ ಒಕ್ಕಲಿಗರ ಸಂಘದಿಂದ ಸ್ಮಾರ್ಟ್ ಸಿಟಿ ವ್ಯವಸ್ಥಾಪಕರನ್ನು ಭೇಟಿಯಾಗಿ ವಿದ್ಯಾರ್ಥಿ ಭವನ ವೃತ್ತದಲ್ಲಿ ಈ ಮೊದಲು ಇದ್ದಂತೆ ಶಾಂತವೇರಿ ಗೋಪಾಲಗೌಡ ವೃತ್ತ ನಾಮಫಲಕ ಅಳವಡಿಸಲು ಮನವಿ ಮಾಡಲಾಯಿತು.
ವೃತ್ತದಲ್ಲಿ ಅಭಿವೃದ್ಧಿ ಕೆಲಸ ಮಾಡುವಾಗ ಶಾಂತವೇರಿ ಗೋಪಾಲಗೌಡ ವೃತ್ತದ ನಾಮಪಾಲಕ ತೆರವುಗೊಳಿಸಿದ್ದಾರೆ. ಪುನಃ ಆ ವೃತ್ತಕ್ಕೆ ಶಾಂತಿ ವೇರಿ ಗೋಪಾಲಗೌಡ ವೃತ್ತವೆಂದು ನಾಮಫಲಕ ಅಳವಡಿಸಬೇಕೆಂದು ಮನವಿ ಕೊಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್, ಉಪಾಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಹನುಮೇಗೌಡ, ಮಾಜಿ ಕಾರ್ಪೊರೇಟರ್ ಜಗದೀಶ್, ಮಾಜಿ ಅಧ್ಯಕ್ಷ ನಾಗರಾಜ್, ರಮೇಶ್ ಕೆ.ಎನ್, ಕುಮಾರ್, ನಾಗರಾಜ್, ಗೋಪಾಲಗೌಡ ಇದ್ದರು.



