ದಾವಣಗೆರೆ:ನಿಧಿ ಆಪ್ಕೆ ನಿಕಟ್ ಅಥವಾ ಭವಿಷ್ಯ ನಿಧಿ ಅದಾಲತ್ ಅನ್ನು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಜೂ.10 ರಂದು ಭವಿಷ್ಯ ನಿಧಿ ಕಚೇರಿ ಶಿವಮೊಗ್ಗದಲ್ಲಿ (ಭವಿಷ್ಯ ನಿಧಿ ಭವನ ಅಟಲ್ ಬಿಹಾರಿ ವಾಜಪೇಯಿ ಲೇಔಟ್ ಮಲ್ಲಿಗೇನಹಳ್ಳಿ ಶಿವಮೊಗ್ಗ) ನೆಡೆಸಲಿದ್ದಾರೆ. ಕೆಳಗಿನ ವೇಳಾಪಟ್ಟಿಯ ಪ್ರಕಾರ ಉದ್ಯೋಗದಾತರು ಮತ್ತು ಟ್ರೆಡ್ ಯೂನಿಯನ್, ಸದಸ್ಯರು, ಪಿಂಚಣಿದಾರರು, ಅದಾಲತ್ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ.
ಚಂದಾದಾರರು /ಪಿಎಫ್ ಸದಸ್ಯರು/ ಪಿಂಚಣಿದಾರರು ಬೆ.11.00 ರಿಂದ ಮ.12.00 ಗಂಟೆಯವರೆಗೆ, ಹಾಗೂ ಉದ್ಯೋಗದಾತರು ಮ.12 ರಿಂದ 01 ಗಂಟೆಯವರೆಗೆ ಸದಸ್ಯರು, ಪಿಂಚಣಿದಾರರು, ಟ್ರೆಡ್ ಯೂನಿಯನ್ ಮತ್ತು ಉದ್ಯೋಗದಾತರು ಕುಂದುಕೊರತೆಯ ವಿವರವನ್ನು ಪಿಎಫ್ ಸಂಖ್ಯೆ, ಸಂಸ್ಥೆಯ ಕೋಡ್ ನಂಬರ್, ಹೆಸರು, ಮಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯೊಂದಿಗೆ ಮುಂಚಿತವಾಗಿ ಒದಗಿಸುವಂತೆ ಸೂಚಿಸಲಾಗಿದೆ. ವಿವರಗಳನ್ನು ಜೂ. 08 ರಂದು ಅಥವಾ ಇಮೇಲ್ ಐಡಿ ro.shivamogga@epfindia.gov.in ಗೆ ಕಳುಹಿಸಬಹುದು ಎಂದು ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



