ದಾವಣಗೆರೆ: 2022-23ನೇ ಸಾಲಿಗೆ ಜಿಲ್ಲಾ ಬಾಲಭವನದಿಂಧ ಬೇಸಿಗೆ ಶಿಬಿರ ನಡೆಸಲು ಏ.28 ರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಮೇ.02 ರಂದು ಕೊನೆಯ ಆಗಿರುತ್ತದೆ. 5-10 ವರ್ಷದೊಳಗಿನ ಆಸಕ್ತ ವಿದ್ಯಾರ್ಥಿಗಳು ಅರ್ಜಿ ನಮೂನೆಗಳನ್ನು ಪಡೆಯಲು ಬಾಲಕರ ಸರ್ಕಾರಿ ಬಾಲ ಮಂದಿರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕುವೆಂಪು ನಗರ, ಎಂಸಿಸಿ “ಎ” ಬ್ಲಾಕ್, ದಾವಣಗೆರೆ ಇಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
ಶಿಬಿರ ಆರಂಭ ಮೇ.04 ರಿಂದ 14 ರವರೆಗೆ ನಡೆಸಲಾಗಿದ್ದು, ಶಿಬಿರದಲ್ಲಿ ಚಿತ್ರಕಲೆ, ಕರಕುಶಲ ಕಲೆ, ಜೇಡಿಮಣ್ಣಿನ ಕಲೆ, ಸಮೂಹ ನೃತ್ಯ, ಕಸದಿಂದ ರಸ, ಕರಾಟೆ, ಯೋಗ, ಯಕ್ಷಗಾನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಬಾಲಭವನ ಸಮಿತಿಯ ಉಪನಿರ್ದೇಶಕರು ಹಾಗೂ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



