ದಾವಣಗೆರೆ: ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಿಳಾ ಘಟಕದಿಂದ ಅಕ್ಕಮಹಾದೇವಿ ಜಯಂತಿ ಆಚರಿಸಲಾಯಿತು.
ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ನೂತನ ಜಿಲ್ಲಾಧ್ಯಕ್ಷ ಶುಭ ಐನಳ್ಳಿ ಅವರ ನೇತೃತ್ವದಲ್ಲಿ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಯಲ್ಲಿ ಹಣ್ಣು ಬಿಸ್ಕತ್ತುಗಳನ್ನು ವಿತರಣೆಯನ್ನು ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದ್ರಾಕ್ಷಯಿಣಿ ಅಂದಾನಪ್ಪ, ಉಪಾಧ್ಯಕ್ಷೆ ಶೋಭಾ ಕೊಟ್ರೇಶ್, ಜಗಳೂರು ತಾಲೂಕು ಅಧ್ಯಕ್ಷ ರೇಖಾ, ಶಶಿಕಲಾ ಬಡದಾಳ, ಪುಷ್ಪ ರಾರಾವಿ, ಮಂಜುಳಾ ಕೆವಿ, ನಾಗವೇಣಿ, ಸುಜಾತಾ ಬುಸ್ನೂರ್, ರಶ್ಮಿ, ವನಜಾಕ್ಷಿ ಮುಂತಾದ ಸದಸ್ಯರು ಭಾಗವಹಿಸಿದ್ದರು.



