Connect with us

Dvgsuddi Kannada | online news portal | Kannada news online

ದಾವಣಗೆರೆ: ಧಗಧಗಿಸಿದ ಬೆಂಕಿಗೆ ಮೂರು ಕುರಿ, ಬೈಕ್, ಬಣವೆ, ಗೋದಾಮು ಸುಟ್ಟು ಭಸ್ಮ

IMG 20230910 075556

ದಾವಣಗೆರೆ

ದಾವಣಗೆರೆ: ಧಗಧಗಿಸಿದ ಬೆಂಕಿಗೆ ಮೂರು ಕುರಿ, ಬೈಕ್, ಬಣವೆ, ಗೋದಾಮು ಸುಟ್ಟು ಭಸ್ಮ

ದಾವಣಗೆರೆ: ಆಕಸ್ಮಿಕವಾಗಿ ಹೊತ್ತಿದ ಬೆಂಕಿಗೆ ಮೂರು ಕುರಿಗಳು, ಒಂದು ಬೈಕ್, ಭತ್ತದ ಹುಲ್ಲಿನ ಬಣವೆ, ಮರದ ಮುಟ್ಟುಗಳು, ಗೋದಾಮು ಸುಟ್ಟು ಭಸ್ಮವಾದ ಘಟನೆ ನಡೆದಿದೆ. ನೋಡ ನೋಡುತ್ತಿದ್ದಂತೆ ಧಗಧಗಿಸಿದ ಬೆಂಕಿ ಇಡೀ ಪ್ರದೇಶ ವ್ಯಾಪಿಸಿದೆ.

ತಾಲೂಕಿನ ಹದಡಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಗ್ರಾಮದ ರೈತ ಕುಟುಂಬ ಗಿಡ್ಡಜ್ಜರ ಮಲ್ಲಿಕಾರ್ಜು ನಪ್ಪಗೆ ಸೇರಿದ ಗೋದಾಮು, ಮರದ ಮುಟ್ಟು, ಕರಿಮಾಳ್ಳರ ಮಂಜಪ್ಪರ ಕಾಳಗದ ಕುರಿಸೇರಿ 3 ಕುರಿಗಳು, ಎಂ.ಡಿ. ನಿಂಗಪ್ಪಗೆ ಸೇರಿದ ಹುಲ್ಲಿನ ಬಣವೆಗೆ ಸುಟ್ಟು ಹೋಗಿವೆ

ಶನಿವಾರ ಬೆಳಗಿನಜಾವ ಈ ಘಟನೆ ನಡೆದಿದೆ‌.‌ ಬೆಂಕಿ ಕಂಡ ಗ್ರಾಮಸ್ಥರು ನಂದಿಸಲು ಸಾಕಷ್ಟು ಪ್ರಯತ್ನಿಸಿದರೂ ಬೆಂಕಿ ನಿಯಂತ್ರಣಕ್ಕೆ ಬಂದಿಲ್ಲ. ಕೂಡಲೇ ಅಗ್ನಿ ಶಾಮದ ದಳ ಆಗಮಿಸಿ ಬೆಂಕಿ ನಂದಿಸಿದ್ದಾರೆ.ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಹಶೀಲ್ದಾರ್‌ ಡಾ.ಅಶ್ವತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬೆಂಕಿ ಅವಘಡದಿಂದಾಗಿ ಕುರಿಗಳ ಕಳೆದುಕೊಂಡವರು, ಮೇವು ಹಾಗೂ ಗೋದಾಮು ಇತರೆ ನಷ್ಟ ಹೊಂದಿದ್ದಾರೆ. ಗ್ರಾಮಸ್ಥರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಬೇಕೆಂದು ಬಿ.ಎಂ.ಸತೀಶ ಮತ್ತು ಇತರರ ಒತ್ತಾಯಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದರು.ಕಂದಾಯ ನಿರೀಕ್ಷಕ ಬಸವರಾಜಪ್ಪ, ಪಶು ವೈದ್ಯಾಧಿಕಾರಿ ಹೇಮಂತಕುಮಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.ಹದಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top