ದಾವಣಗೆರೆ: ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತಿನಿಂದ ಒಂದು ಸೂರು ಪುಸ್ತಕ ನೂರು ಯೋಜನೆಯಡಿಯಲ್ಲಿ ವೈಜ್ಞಾನಿಕತೆ ವೈಚಾರಿಕ ಲೇಖನಗಳನ್ನು ಒಳಗೊಂಡ ಪರಿಸರ ಶಿಕ್ಷಣ ಮನಸ್ಸುಆರೋಗ್ಯ ಪ್ರಚಲಿತ ವಿದ್ಯಮಾನಗಳು ಸಾಮಾಜಿಕ ಜಾಲತಾಣಗಳ ತಲ್ಲಣಗಳು ಒಳಗೊಂಡಂತೆ ನೂರು ಪುಸ್ತಕಗಳನ್ನು ಉಚಿತವಾಗಿ ಪ್ರಕಟಣೆ ಮಾಡುವ ಉದ್ದೇಶವನ್ನು ಹೊಂದಿದೆ. ಪ್ರತಿಜಿಲ್ಲೆಯಿಂದ ಮೂರುಜನ ಲೇಖಕರ ಪುಸ್ತಕಗಳನ್ನು ಪ್ರಕಟಿಸಲಾಗುವುದು.
ಈ ಸಂಬಂಧ ರಾಜ್ಯ ಸಮಿತಿ ಆಯ್ಕೆ ಅಂತಿಮವಾಗಿದೆ. ಪುಸ್ತಕವು ನೂರು ಪುಟಗಳನ್ನು ಮೀರದಂತಿರಬೇಕು. ಏಪ್ರಿಲ್ 20 ಕೊನೆಯ ದಿನವಾಗಿರುತ್ತದೆ. ಆಸಕ್ತ ಲೇಖಕರು ಯಾವುದೇ ಕಾಗುಣಿತ ದೋಷವಿಲ್ಲದ ತಮ್ಮ ಪುಸ್ತಕದ ಹಾರ್ಡ್ ಕಾಪಿ ಹಾಗೂ ಇ-ಮೇಲ್ ಮುಖಾಂತರ ಸಾಫ್ಟ್ ಕಾಪಿಯನ್ನು ಪರಿಷತ್ತಿನ ದಾವಣಗೆರೆ ಜಿಲ್ಲಾಅಧ್ಯಕ್ಷ ಡಾ:ಜಗದೀಶ್ಎಂ.ಆರ್ ಅವರ ಫೋನ್ 9740776111ಗೆ ಸಂಪರ್ಕಿಸಿ.



