Connect with us

Dvgsuddi Kannada | online news portal | Kannada news online

ಕೊರೊನಾ ಸೋಂಕಿನ ಬಗ್ಗೆ ನಿರ್ಲಕ್ಷ್ಯ ಬೇಡ: ಡಿಎಚ್ ಓ

ಪ್ರಮುಖ ಸುದ್ದಿ

ಕೊರೊನಾ ಸೋಂಕಿನ ಬಗ್ಗೆ ನಿರ್ಲಕ್ಷ್ಯ ಬೇಡ: ಡಿಎಚ್ ಓ

ದಾವಣಗೆರೆ: ಕೊರೊನಾ ಸೋಂಕು ರಾಜ್ಯದಲ್ಲಿ ಹೆಚ್ಚಳವಾಗುತ್ತಿದೆ.  ಸಾರ್ವಜನಿಕರು  ಹೆಚ್ಚು ಜಾಗೃತವಾಗಿರಬೇಕಿದ್ದು, ನಿರ್ಲಕ್ಷ್ಯ ವಹಿಸಬೇಡಿ  ಎಂದು ಡಿಎಚ್ ಓ ನಾಗರಾಜ್ ಸಾರ್ವಜನಿಕರಿಗೆ ಕರೆ ನೀಡಿದರು.

ಸುಬಿಕ್ಷಾ ಫೌಂಡೇಶನ್  ಭಾನುವಾರ ಸಂಜೆ ಕಾಯಿಪೇಟೆಯಲ್ಲಿ  ಆಯೋಜಿಸಿದ್ದ ಕೊರೊನಾ ಜಾಗೃತಿ ಮತ್ತು ಸಂತೆಯಲ್ಲಿ ಸೇರಿದ್ದ ಸಾರ್ವಜನಿಕರಿಗೆ ಮಾಸ್ಕ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೊರೊನಾ ಸೋಂಕು ಇಡೀ ಜಗತ್ತನೇ ತಲ್ಲಣಗೊಳಿಸಿದೆ. ಇದೀಗ ಮತ್ತೆ ಎರಡನೇ ಅಲೆ ಉಂಟಾಗಿದ್ದು, ಮತ್ತೆ ಸೋಂಕು ಏರು ಗತಿಯಲ್ಲಿ ಸಾಗುತ್ತಿದೆ. ಹೀಗಾಗಿ ಎಲ್ಲರು ಸಾಮಾಜಿಕ ಅಂತರ, ಮಾಸ್ಕ್,ಸ್ಯಾನಿಟೈಸರ್ ಹಾಗೂ ಸರ್ಕಾರದ  ಮಾರ್ಗ ಸೂಚಿಗಳನ್ನು  ಪಾಲಿಸಬೇಕು ಎಂದರು.

subhikshya 4

ಸುಬಿಕ್ಷಾ ಫೌಂಡೇಶನ್ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿರುವುದು ಶ್ಲಾಘನೀಯ ಎಂದರು. ಈ ವೇಳೆ ಡಿಎಚ್ ಓ ಸಂತೆಯಲ್ಲಿ ಸಾರ್ವಜಿಕರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿ, ಮಸ್ಕ್ ಗಳನ್ನು ವಿತರಿಸದರು. ಈ ಸಂದರ್ಭದಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ  ಗೋಣೆಪ್ಪ, ಅನಿತಾ ಮಾಲತೇಶ್ ರಾವ್, ಲಕ್ಷ್ಮಿ ರವಿಶಂಕರ್,  ಸುಬಿಕ್ಷಾ ಫೌಂಡೇಶನ್ ಕಾರ್ಯದರ್ಶಿ ಸೌಮ್ಯ ಜಾಧವ್, ಸದಸ್ಯರಾದ ಜಯಂತ್, ಆಶಾ, ಸುಮಾ,  ಭಾಗ್ಯ ಪಿಸಾಳೆ, ಸೌಂದರ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top