ದಾವಣಗೆರೆ: ಅಪ್ಪು ಅಭಿಮಾನಿಗಳ ಬಳಗ ವತಿಯಿಂದ ನಗರದ ಚಿಕ್ಕಮಣಿ ದೇವರಾಜ್ ಅರಸು ಬಡಾವಣೆಯ ಸಿದ್ಧರಾಮೇಶ್ವರ ವೃತ್ತದಲ್ಲಿ ಪುನೀತ್ ರಾಜಕುಮಾರ್ ಪುತ್ಥಳಿ ಅನಾವರಣಗೊಂಡ 14ನೇ ದಿನ ಹಿನ್ನೆಲೆ ಆತ್ಮ ಶಾಂತಿಗಾಗಿ ಗಣಹೋಮ ಮತ್ತು ಸುದರ್ಶನ ಹೋಮ ಹಮ್ಮಿಕೊಳ್ಳಲಾಗಿತ್ತು.
ಕೆಎಚ್ ರೇವಣ್ಣ ಸಿದ್ದಪ್ಪ, ಅವರ ಧರ್ಮಪತ್ನಿ ರೇಖಾ ಅಧ್ಯಕ್ಷತೆಯಲ್ಲಿ ಹೋಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ತಿಮ್ಮಣ್ಣ, ವೀರೇಶ್, ಎನ್ . ಲೋಕಪ್ಪ, ರಾಜಪ್ಪ, ಬಸವರಾಜಪ್ಪ , ಎಂ. ಎಸ್ ಸುರೇಶ್, ಮಹೇಶ್, ನಾಗೇಶ್, ಕಿರಣ್, ಅಂಜನಿ, ಹನುಮಂತಪ್ಪ, ಮುಕ್ಕಣ್ಣ, ಚಂದ್ರಶೇಖರ್ ಇತರರು ಪಾಲ್ಗೊಂಡಿದ್ದರು.



