ದಾವಣಗೆರೆ: ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕೆ.ಆರ್. ಮಾರುಕಟ್ಟೆಯಲ್ಲಿ ಜನದಟ್ಟಣೆ ಹೆಚ್ಚಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗ ಹೆಚ್ಚಾಗಿ ಹರಡುವ ಭೀತಿ ಇದ್ದು, ಇದನ್ನು ನಿಯಂತ್ರಿಸಲು ಮುಖ್ಯ ಮಾರುಕಟ್ಟೆ ಪ್ರಾಂಗಣದ ವಿಸ್ತಾರವಾದ ಸ್ಥಳವಾದ ‘ಇ’ ಬ್ಲಾಕಿಗೆ ಸಗಟು ಸೊಪ್ಪಿನ ವ್ಯಾಪಾರವನ್ನು ಸ್ಥಳಾಂತರಿಸಲಾಗಿದೆ.
‘ಇ’ ಬ್ಲಾಕಿನಲ್ಲಿ ನಲ್ಲಿ ಆರ್ಕೆವಿವೈ ಯೋಜನೆಯಲ್ಲಿ ನಿರ್ಮಾಣ ಮಾಡಿರುವ ಮಳಿಗೆಗಳನ್ನು, ಸಗಟು ಸೊಪ್ಪಿನ ವ್ಯಾಪಾರಸ್ಥರಿಗೆ ಹಂಚಿಕೆ ಮಾಡಲಾಗಿದ್ದು, ಇನ್ಮುಂದೆ ಈ ಮಳಿಗೆಗಳಲ್ಲಿಯೇ ಸಗಟು ಸೊಪ್ಪಿನ ವ್ಯಾಪಾರ ವಹಿವಾಟನ್ನು ನಡೆಸುವಂತೆ ಕೋರಲಾಗಿದೆ.



