ದಾವಣಗೆರೆ: ನಗರ ದೇವತೆ ಶ್ರೀ ದುರ್ಗಾಂಬಿಕಾದೇವಿ ಜಾತ್ರಾ ಮಹೋತ್ಸವ ಹಿನ್ನೆಲೆ ಮನೆ ಮನೆಗೆ ತೆರಳಿ ಸಂಗ್ರಹಿಸಿದ ಡಬ್ಬಿ ಗಡಿಗಿ ಎಣಿಕೆ ಕಾರ್ಯ ನಡೆದಿದ್ದು, ಒಟ್ಟು 11,80,633 ರೂ. ಸಂಗ್ರಹವಾಗಿದೆ.
ದಾವಣಗೆರೆ: ಕೊನೆ ಭಾಗಕ್ಕೆ ತಲುಪದ ಭದ್ರಾ ನಾಲೆ ನೀರು; ಅಕ್ರಮ ಪಂಪ್ ಸೆಟ್ ತೆರವು
ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ
ಹಂದರಗಂಬ ಪೂಜೆಯ ಮಾರನೇ ದಿನದಿಂದಲೇ ಡಬ್ಬಿ ಬಳೆಗಳು, ತಾಳಿ, ಮೂಗುತಿ ಸೇರಿದಂತೆ ದೇವಿ ಜಾತ್ರೆಗೆ ಗಡಿಗೆ ನಗರದಲ್ಲಿ ಪ್ರತಿದಿನ ಮನೆ ಮನೆಗೆ ಪ್ರತಿದಿನ ತೆರಳಿ ಕಾಣಿಕೆ ಸಂಗ್ರಹಿಸಲಾಗಿತ್ತು.
ಸಾರ್ವಜನಿಕರು ದೇವಿಗೆ ಜಾತ್ರೆಗೆ ತಮ್ಮ ಭಕ್ತಿ ಅನುಸಾರ ತಿಳಿದಷ್ಟು ಹಣವನ್ನು ಡಬ್ಬಿ ಗಡಿಗೆಗೆ ಹಾಕಿದ್ದರು. ಶ್ರೀ ದುರ್ಗಾಂಬಿಕಾ ದೇವಸ್ಥಾನ ಬಾಬುದಾರ ಕಮಿಟಿಯ ಗೌಡರು, ಶಾನಭೋಗರು, ಬಣಕಾರರು,ರೈತರು, ಕಮ್ಮಾರರು, ಬಾರಿಕರು, ಮಡಿವಾಳರು, ಕುಂಬಾರರು, ತಳವಾರರು ಹಾಗೂ ಸದ್ಭಕ್ತರ ಸಮ್ಮುಖದಲ್ಲಿ ಶನಿವಾರ ಡಬ್ಬಿ ಗಡಿಗೆ ಎಣಿಕೆ ನಡೆದಿದೆ.
ಸಂಗ್ರಹವಾದ ಹಣವನ್ನು ದೇವಿಗೆ ಕಾಲುಂಗುರ,
ಬಳಸಲಾಗುವುದು. ದೇಣಿಗೆ ನೀಡಿದ ಹಾಗೂ ಡಬ್ಬಿಗಡಿಗೆ ಸಂಗ್ರಹಣೆ ಕಾರ್ಯದಲ್ಲಿ ಭಾಗವಹಿಸಿದ ದೇವಿಭಕ್ತರಿಗೆ ದೇವಸ್ಥಾನ ಧರ್ಮದರ್ಶಿಗಳು ಧನ್ಯವಾದ ತಿಳಿಸಿದ್ದಾರೆ.



