Connect with us

Dvgsuddi Kannada | online news portal | Kannada news online

ರಸ್ತೆಯಲ್ಲಿ ಚಿನ್ನದ ಕಡಗ ಕಳೆದುಕೊಂಡಿದ್ದ ಬೆಸ್ಕಾಂ‌ ಉದ್ಯೋಗಿ; ಸಿಕ್ಕ ಕಡಗ ಠಾಣೆಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

dvg news 8

ದಾವಣಗೆರೆ

ರಸ್ತೆಯಲ್ಲಿ ಚಿನ್ನದ ಕಡಗ ಕಳೆದುಕೊಂಡಿದ್ದ ಬೆಸ್ಕಾಂ‌ ಉದ್ಯೋಗಿ; ಸಿಕ್ಕ ಕಡಗ ಠಾಣೆಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ದಾವಣಗೆರೆ: ಬೆಸ್ಕಾಂ‌ ಉದ್ಯೋಗಿಯೊಬ್ಬರು ಕಚೇರಿಗೆ ಬರುವಾಗ ರಸ್ತೆಯಲ್ಲಿ ಚಿನ್ನದ ಕಡಗ ಕಳೆದುಕೊಂಡಿದ್ದರು. ಆ ಕಡಗ ಆಟೋ ಚಾಲಕನಿಗೆ ಸಿಕ್ಕಿದ್ದು, ಕಡಗವನ್ನು ಪೊಲೀಸ್ ಠಾಣೆಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕನಿಗೆ ಸನ್ಮಾನ ಮಾಡಲಾಗಿದೆ.

ಇಂದು ( ಮೇ 15) ಬೆಳಿಗ್ಗೆ11.00 ಗಂಟೆ ಸಮಯದಲ್ಲಿ ಡಾಲ್ಲೋರ್ಸ್ ಕಾಲೋನಿ ನಿವಾಸಿ ಶಿಲ್ಪ ಜಿ ಬೆಸ್ಕಾಂ ಕಚೇರಿಗೆ ಕೆಲಸಕ್ಕೆ ಹೋಗಲು ತಮ್ಮ ದ್ವಿ ಚಕ್ರ ವಾಹನದಲ್ಲಿ ಹೋಗುತ್ತಿರುವಾಗ ಆಕಸ್ಮಿಕವಾಗಿ ತಮ್ಮ ಕೈಯಲ್ಲಿ ಇರುವ 21 ಗ್ರಾಂ ತೂಕದ ಚಿನ್ನದ ಕಡಗವನ್ನು ಕಳೆದುಕೊಂಡಿದ್ದರು. ಆ ಕಡಗ ಆಟೋ ಚಾಲಕ ಚಮನ್ ಸಾಬ್ ಎನ್ನುವವರಿಗೆ ಸಿಕ್ಕಿದ್ದು, ಆಟೋ ಚಾಲಕ ಕಡಗವನ್ನು ಸಂಜೆ ವಿದ್ಯಾನಗರ ಪೊಲೀಸ್ ಠಾಣೆಗೆ ಹಾಜರಾಗಿ ಪೊಲೀಸರ ವಶಕ್ಕೆ ನೀಡಿದ್ದಾರೆ.‌

ಚಿನ್ನದ ಕಡಗ ವಾರಸುದಾರರಾದ ಶಿಲ್ಪ ಅವರನ್ನು ಠಾಣೆಗೆ ಕರೆಯಿಸಿ ಕಡಗ ಹಿಂದಿರುಗಿಸಿದ್ದಾರೆ. ಆಟೋ ಚಾಲಕರಾದ ಚಮನ್ ಸಾಬ್ ಪ್ರಾಮಾಣಿಕತೆಯನ್ನು ವಿದ್ಯಾನಗರ ಠಾಣೆಯ ಪೊಲೀಸ್ ನಿರೀಕ್ಷಕಿ ಶಿಲ್ಪ YS & ಪಿಎಸ್ಐ ವಿಜಯ ಎಂ ಅವರು ಶ್ಲಾಘಸಿ ಗೌರವಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top