ದಾವಣಗೆರೆ; ಮಹಾಶಿವರಾತ್ರಿ ಹಬ್ಬ ಹಿನ್ನೆಲೆ ಫೆ. 26ರಂದು ಸಂಜೆಯಿಂದ ನಗರದ ವಿವೇಕಾನಂದ ಬಡಾವಣೆಯಲ್ಲಿರುವ ಶಿವ ಧ್ಯಾನ ಮಂದಿರದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಅರ್ಚನಾ ಉಡುಪ ಅವರಿಂದ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಸಚಿವ ಎಸ್ ಎಸ್ ಮಲ್ಲಿಕಾರ್ಜುನರವರು ಹಾಗೂ ಸಂಸದೆ ಡಾ ಪ್ರಭಾ ಮಲ್ಲಿಕಾರ್ಜುನ ದಾವಣಗೆರೆಯ ಜನತೆಗೆ ಭಕ್ತಿ-ಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ನಾಳೆ (ಫೆ.26)ಬುಧವಾರ ಸಂಜೆ 7.30 ಗಂಟೆಗೆ ಶಿವಧ್ಯಾನ ಮಂದಿರ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ.
ಶಿವಾಧ್ಯಾನ ಮಂದಿರದ ಭಕ್ತವೃಂದ, ಬಾಪೂಜಿ ವಿದ್ಯಾಸಂಸ್ಥೆ – ಬಿಐಇಟಿ ಕಾಲೇಜು , ಸ್ವಾಮಿ ವಿವೇಕಾನಂದ ಬಡಾವಣೆ ನಾಗರೀಕರ ಪರವಾಗಿ ಆತ್ಮೀಯ ಸ್ವಾಗತಕೋರಲಾಗಿದೆ.