ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಮಲೇಬೆನ್ನೂರು ವ್ಯಾಪ್ತಿಯ ಭದ್ರಾ ನಾಲೆಗೆ ಅಕ್ರಮ ಪಂಪ್ ಸೆಟ್ ಹಾವಳಿ ಹೆಚ್ಚಾಗಿದ್ದು, ಕೊನೆ ಭಾಗಕ್ಕೆ ನೀರು ತಲುಪುವುದು ಕಷ್ಟವಾಗಿದೆ. ಹೀಗಾಗಿ ನಾಲೆಗೆ ಅಳವಡಿಸಿದ್ದ ಅಕ್ರಮ ಪಂಪ್ಸೆಟ್ಗಳನ್ನು ನೀರಾವರಿ ನಿಗಮದ ಎಂಜಿನಿಯರಗಳು ತೆರವುಗೊಳಿಸಿದರು.
ನಿಗಮದ 3ನೇ ಉಪವಿಭಾಗದ ಕೊಪ್ಪ, ಕೊಮಾರನಹಳ್ಳಿ, ಬಸಾಪುರ, ಬೇವಿನಹಳ್ಳಿ, ಕಾಮಲಾಪುರ ಹಾಗೂ 11 ಎಫ್ ನಾಲೆವರೆಗೆ ಅಳವಡಿಸಿದ್ದ ಪಂಪ್ಸೆಟ್ಗಳನ್ನು ಪೊಲೀಸ್ ಭದ್ರತೆಯಲ್ಲಿ ತೆರವುಗೊಳಿಸಲಾಯಿತು. ಮೇಲ್ಭಾಗದಲ್ಲಿ ಅಕ್ರಮ ಪಂಪ್ಸೆಟ್ಗಳನ್ನು ರಾಜಾರೋಷವಾಗಿ ಹಾಕಿಕೊಂಡಿದ್ದಾರೆ. ನಾಲೆಯ ನೀರಿನ ಹರಿವು ಕಡಿಮೆಯಾಗಿದೆ. ಜಿಲ್ಲಾಡಳಿತ ಪಂಪ್ಸೆಟ್ ತೆರವು ಮಾಡುವಲ್ಲಿ ತಾರತಮ್ಯ ಮಾಡುತ್ತಿದೆ ಆರೋಪಿಸಿದರು.
ತೆರವಿಗೆ ಬಂದು ಅಧಿಕಾರಿಗಳ ಜತೆ ವಾಗ್ವಾದ ನಡೆಸಿದ ಸ್ಥಳೀಯರು, ಕೊನೆ ಭಾಗದ ತೋಟಗಳಿಗೆ ನೀರು ತಲುಪಿಸಬೇಕು ಎಂದು ರೈತರು ಆಗ್ರಹಿಸಿದರು. ಎಇಇ ಕೃಷ್ಣಮೂರ್ತಿ, ಉಪತಹಶೀಲ್ದಾರ್ ಆರ್. ರವಿ, ಗ್ರಾಮ ಆಡಳಿತಾಧಿಕಾರಿ ಅಣ್ಣಪ್ಪ, ರಾಮಕೃಷ್ಣ, ಪೊಲೀಸರು, ಬೆಸ್ಕಾಂ ಸಿಬ್ಬಂದಿ ಅದ್ ದ



