ದಾವಣಗೆರೆ: ಜಿಲ್ಲಾಧಿಕಾರಿ ಆದೇಶ ಮೇರೆಗೆ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇಂದು (ಜ.17) ಅನಧಿಕೃತ ಹೋರ್ಡಿಂಗ್ ತೆರವು ಕಾರ್ಯಾಚರಣೆ ನಡೆಯಿತು. ಬೆಳಗ್ಗೆಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಪಾಲಿಕೆಯ ಮೂರು ವಲಯದಲ್ಲಿ ಏಕಾಏಕಿ ಹೋರ್ಡಿಂಗ್ ತೆರವು ನಡೆಸಲಾಯಿತು.
ನಗರದ ಗುಂಡಿ ಮಹದೇವಪ್ಪ ವೃತ್ತ ಸೇರಿದಂತೆ ಪ್ರಮುಖ ರಸ್ತೆ, ವೃತ್ತಗಳಲ್ಲಿ ಅಳವಡಿಸಿದ್ದ ಅನಧಿಕೃತ ಹೋರ್ಡಿಂಗ್ ತೆರವು ಮಾಡಲಾಯಿತು. ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶದ ಮೇರೆಗಗೆ 20 ಕ್ಕೂ ಹೆಚ್ವು ಹೋರ್ಡಿಂಗ್ ತೆರವುಗೊಳಿಸಲಾಗಿದೆ.
ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅನಧಿಕೃತ ಹೋರ್ಡಿಂಗ್ ಹಾವಳಿ ಬಗ್ಗೆ ಚರ್ಚೆಯಾಗಿತ್ತು. ನಗರದಲ್ಲಿ ಎಷ್ಟು ಹೋರ್ಡಿಂಗ್ ಇವೆ..? ಇದರಲ್ಲಿ ಅಧಿಕೃತ ಎಷ್ಟು..? ಅನಧಿಕೃತ ಎಷ್ಟು..? ಆದಾಯ ಎಷ್ಟು ಬರುತ್ತಿದೆ ಎಂಬ ಮಾಹಿತಿಯೇ ಅಧಿಕಾರಿಗಳ ಬಳಿ ಇಲ್ಲ. ವಿಪಕ್ಷ ಪ್ರಶ್ನಿಸಿತ್ತು.
ಈ ಅನಧಿಕೃತ ಹೋರ್ಡಿಂಗ್ ಗಳಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಹೀಗಗಾಗಿ ಕೂಡಲೃ ತೆರವುಗೊಳಿಸಬೇಕು ಎಂದು ಅನೇಕರು ಒತ್ತಾಯಿಸಿದ್ದರು. ಇದಲ್ಲದೆ ಜಿಲ್ಲಾಡಳಿತ ಅನಧಿಕೃತ ಹೋರ್ಡಿಂಗ್ ತೆರವಿಗೆ 15 ದಿನಗಳ ಕಾಲಾವಕಾಶ ನೀಡಿ ಮಹಾನಗರ ಪಾಲಿಕೆಗೆ ಸೂಚನೆ ನೀಡಿತ್ತು.
ಹೋರ್ಡಿಂಗ್ ತೆರವು ಮಾಡುವ ಬಗ್ಗೆ ಯಾವುದೇ ನೋಟಿಸ್ ನೀಡಿಲ್ಲ. ನೋಟಿಸ್ ನೀಡಿದ್ದರೆ ನಾವೇ ತೆರವು ಮಾಡುತ್ತಿದ್ದೆವು. ಯಾವುದೇ ಮುನ್ಸೂಚನೆ, ನೋಟಿಸ್ ನೀಡದೆ ತೆರವುಗೊಳಿಸಿದ್ದರಿಂದ ಸಾಕಷ್ಟು ನಷ್ಟವಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಕೆ.ಜಿ. ಶಿವಕುಮಾರ್, ಶ್ರೀನಿವಾಸ್, ಸಾಯಿಪ್ರಸಾದ್, ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.