ದಾವಣಗೆರೆ: ನಗರದ ಹೊರ ವಲಯದ ಆವರಗೆರೆ ಬಳಿಯ ಶ್ರೀ ಭಗವಾನ್ ಮಹಾವೀರ್ ಗೋಶಾಲೆಗೆ ರೈತರು ತಮ್ಮ ಕೈಲಾದಷ್ಟು ಮೇವು ದಾನ ಮಾಡುವಂತೆ ಕೋರಲಾಗಿದೆ.
ಪ್ರಾಣಿದಯಾ ಜ್ಞಾನ ಪ್ರಸಾರಕ ಸಂಘದಿಂದ ನಡೆಯುತ್ತಿರುವ ಈ ಗೋಶಾಲೆಯಲ್ಲಿ 600 ಕ್ಕೂ ಹೆಚ್ಚು ಹಸು ಮತ್ತು ಕರುಗಳನ್ನು ಸಾಕಲಾಗುತ್ತಿದೆ. ಈಗಾಗಲೇ ಅನೇಕ ಜನರು, ರೈತರು ಮೇವನ್ನು ದಾನಮಾಡುತ್ತಿದ್ದಾರೆ. ದಾನಿಗಳು ಗೋಶಾಲೆಗೆ ಹುಲ್ಲನ್ನುನೀಡುವುದರೊಂದಿಗೆ ಹಸು ಮತ್ತು ಕರುಗಳ ರಕ್ಷಣೆಗೆ ಸಹಕರಿಸುವಂತೆ ಗೋಶಾಲೆಯ ಜಿತೇಂದ್ರ ಜೈನ್ (94485-16033), ದಿನೇಶ್ ಜೈನ್ (99803-39333) ಮನವಿ ಮಾಡಿದ್ದಾರೆ.