ದಾವಣಗೆರೆ: ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯ ವಲಯ, ಉಪ ವಿಭಾಗ, ಜಿಲ್ಲಾ ವಿಚಕ್ಷಣ ದಳ ಕಾರ್ಯನಿರ್ವಾಹಕ ಅಧಿಕಾರಿಗಳು ಅಬಕಾರಿ ಅಕ್ರಮ ಚಟುವಟಿಕೆ ತಡೆಗಟ್ಟುವ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಜಿಲ್ಲೆಯ ವಿವಿಧ ಕಡೆ ದಾಳಿ ನಡೆಸಿದ್ದು, ಒಟ್ಟು 10 ಲಕ್ಷ ಮೌಲ್ಯದ ಮದ್ಯ,15 ಬೈಕ್ ಗಳನ್ನು ಜಪ್ತಿ ಮಾಡಲಾಗಿದೆ.
ಚುನಾವಣೆ ನೀತಿ ಸಂಹಿತೆ ಜಾರಿಯಾದಾಗಿನಿಂದ ದಾಖಲಿಸಲಾದ ಮೊಕದ್ದಮೆಗಳು ಮತ್ತು ವಶಪಡಿಸಿಕೊಳ್ಳಲಾದ ಅಬಕಾರಿ ವಸ್ತುಗಳ ವಿವರ: ಘೋರ-23, ಬಿಎಲ್ಸಿ-33, 15-ಎ-89 ಒಟ್ಟು 123 ಪ್ರಕರಣ ದಾಖಲಾಗಿರುತ್ತದೆ. 374.655 ಲೀಟರ್ ಮದ್ಯ, 12.530 ಲೀಟರ್ ಬಿಯರ್, 15 ದ್ವಿಚಕ್ರವಾಹನವನ್ನು ಜಪ್ತು ಮಾಡಲಾಗಿದೆ. ದಸ್ತಗಿರಿ ಮಾಡಿದ ಆರೋಪಿಗಳ ಸಂಖ್ಯೆ-123. ಜಪ್ತಿ ಮಾಡಲಾದ ಮದ್ಯ ಮತ್ತು ವಾಹನದ ಅಂದಾಜು ಮೌಲ್ಯ ರೂ.10,79,523 ಗಳಾಗಿರುತ್ತದೆ ಎಂದು ಅಬಕಾರಿ ಉಪ ಆಯುಕ್ತರಾದ ಟಿ.ವಿ.ಶೈಲಜಾ ತಿಳಿಸಿದ್ದಾರೆ.



