ದಾವಣಗೆರೆ: ಅಯೋಧ್ಯೆಯಲ್ಲಿ ಶ್ರೀ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಅಂಗವಾಗಿ ನಗರದ ಗಡಿಯಾರ ಕಂಬದ ವರ್ತಕರು ಏರ್ಪಡಿಸಲಾಗಿದ್ದ ಪೂಜಾ ಕಾರ್ಯಕ್ರಮ ಹಾಗೂ ಲಾಡು ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಧಾನ ಪರಿಷತ್ತಿನ ಮುಖ್ಯ ಸ್ವಚೇತಕ ರವಿಕುಮಾರ್ ಭಾಗವಹಿಸಿ ಸಾರ್ವಜನಿಕರಿಗೆ ಲಾಡು ವಿತರಿಸಿದರು.
ಸಂದರ್ಭದಲ್ಲಿ ಮಹಾನಗರ ಪಾಲಿಕೆ ವಿಪಕ್ಷ ನಾಯಕರಾದ ಪ್ರಸನ್ನ ಕುಮಾರ್, ಮಾಜಿ ಮೇಯರ್ ಎಸ್. ಟಿ. ವೀರೇಶ್, ಹಿರಿಯ ಮುಖಂಡ ವೈ ಮಲ್ಲೇಶ್, ಮಾಜಿ ಸದಸ್ಯ ಶಿವನಗೌಡ ಟಿ ಪಾಟೀಲ್, ವರ್ತಕರಾದ ಮಹೇಂದ್ರ ಕೊಠಾರಿ, ರಮೇಶ್ ಓಸ್ವಾಲ್, ಮೋಹನ್ ಗಂಗಾವತಿ, ಹರಿಹರದ ನಾಗರಾಜ್, ಜಿತೇಂದ್ರ ಕುಮಾರ್, ಲಿಖಿತ್ ಜೈನ್, ರಾಹುಲ್ ಜೈನ್, ಕಿರಣ, ಆನಂದ್, ನಿಖಿಲು ಬಾಹುಬಲಿ, ದಿಲೀಪ್, ಶೀತಲ್ , ಕೆ.ಜೆ.ಪಿ ಗೋಲ್ಡ್ ಸಂದೇಶ್, ಆಸೂಜಿ ಅಂಗಡಿಯ ಮಾಲೀಕರು ಆಟೋ ಚಾಲಕರಾದ ಗಂಗಾಧರ್, ಆನಂದ್, ಪೇಪರ್ ಮಹಾರುದ್ರಪ್ಪ, ಸೇರಿದಂತೆ ಗಡಿಯಾರ ಕಂಬದ ಸುತ್ತಮುತ್ತಲಿನ ವ್ಯಾಪಾರಸ್ಥರು ಭಾಗಿಯಾಗಿದ್ದರು



