ದಾವಣಗೆರೆ: ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿರುವ ಕನ್ನಡವನದ ನಟ ಪುನೀತ್ ರಾಜಕುಮಾರ್ ಪ್ರತಿಮೆ ಮುಂದಿರುವ ಕನ್ನಡ ಧ್ವಜ ಸ್ತಂಭವನ್ನು ಧ್ವಂಸಗೊಳಿಸಲಾಗಿದೆ ಎಂದು ಕರುನಾಡ ಕನ್ನಡ ಸೇನೆ ಮತ್ತು ಕನ್ನಡ ಪರ ಸಂಘಟನೆಯ ಅಧ್ಯಕ್ಷ ಕೆ.ಟಿ ಗೋಪಾಲಗೌಡ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ, ಪರಿಸರದ ಅಭಿಮಾನದಿಂದ ಕರುನಾಡ ಕನ್ನಡ ಸೇನೆ ವತಿಯಿಂದ ದಶಕಗಳಿಂದ ಕಸದ ರಾಶಿಯಿಂದ ತುಂಬಿದ್ದ ಸ್ಥಳವನ್ನು ಸ್ವಚ್ಛಗೊಳಿಸಿ ನೂರಾರು ಮರಗಳನ್ನು ಬೆಳೆಸಲಾಗಿದೆ. ಕನ್ನಡದ ಹೋರಾಟಗಾರರು, ಕವಿಗಳು, ಸಾಹಿತಿಗಳ ಚಿತ್ರಗಳನ್ನು ಗೋಡೆ ಬರಹಗಳನ್ನು ಬರೆಯಿಸಿ ಕನ್ನಡ ಧ್ವಜವನ್ನು ನಿರ್ಮಿಸಿ ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ.ಆದರೆ ಇದೀಗ ಕನ್ನಡವನದ ಧ್ವಜಸ್ತಂಭವನ್ನು ಧ್ವಂಸ ಮಾಡಲಾಗಿದೆ ಇದನ್ನು ಕೇಳಿದರೆ ಸ್ಥಳೀಯ ಮಹಾನಗರ ಪಾಲಿಕೆಯ ಸದಸ್ಯರು ಹೇಳಿದ್ದಾರೆಂದು ತಿಳಿಸಿದ್ದು, ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದಿದ್ದಾರೆ.
ಕನ್ನಡ ಧ್ವಜವಿದ್ದ ಧ್ವಜ ಸ್ತಂಭ ಧ್ವಂಸಗೊಳಿಸಿರುವುದು ಕನ್ನಡಿಗರಿಗೆ ಹಾಗೂ ದಿ.ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಮಾಡಿದ ಅವಮಾನ. ಉದ್ಯಾನವನಕ್ಕೆ ನ್ಯಾಯಾಲಯದಿಂದ ಪರ್ಮನೆಂಟ್ ಇನ್ಜಕ್ಷನ್ ಇದೆ. ಹೀಗಿದ್ದರೂ ಧ್ವಂಸಗೊಳಿಸಿರುವುದು ಖಂಡನೀಯ.ಈ ಸಂದರ್ಭದಲ್ಲಿ ಪರಿಸರ ಪ್ರೇಮಿ ಗಿರೀಶ್ ದೇವರಮನೆ, ಎಂ.ಜಿ ಶ್ರೀಕಾಂತ್, ರಾಜೇಂದ್ರ ಬಂಗೇರ, ಕೆ.ಎನ್ ವೆಂಕಟೇಶ್, ಮಾರುತಿ,ಶಿವರಾಜ್, ಶಿವಕುಮಾರ್ ಉಪಸ್ಥಿತರಿದ್ದರು.



