ದಾವಣಗೆರೆ: ಅಸೂಯೆಯಿಂದ ಅಡಿಕೆ ಸಸಿಗಳಿಗೆ ಕಳೆನಾಶಕ ಸಿಂಪಡಿಸಿದ ದುಷ್ಕರ್ಮಿಗಳು; 1,500 ಸಸಿಗಳು ನಾಶ..!

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ದಾವಣಗೆರೆ; ದುಷ್ಕರ್ಮಿಗಳು ಅಸೂಯೆಯಿಂದ ಜಮೀನಿನಲ್ಲಿ ನಾಟಿ ಮಾಡಲು ತಂದಿಟ್ಟಿದ್ದ ಅಡಿಕೆ ಸಸಿಗಳಿಗೆ ಕಳೆ ನಾಶಕ ಸಿಂಪಡಿಸಿದ ಘಟನೆ ನಡೆದಿದೆ. ಇದರಿಂದ 1,500 ಸಸಿ ನಾಶವಾಗಿವೆ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಯರಲಕಟ್ಟೆ ಗ್ರಾಮದಲ್ಲಿ ಈ ಘಟನೆ ಜರುಗಿದೆ.

ಪರಮೇಶ್ವರಪ್ಪ ಎನ್ನುವ ರೈತ ನಾಟಿ ಮಾಡಲು 3 ಸಾವಿರ ಅಡಿಕೆ ಸಸಿಗಳನ್ನು ಶಿವಮೊಗ್ಗ‌ ಕಡೆಯಿಂದ ತಂದಿದ್ದರು. ಅದರಲ್ಲಿ ಅರ್ಧ(1500) ಜಮೀನಿನಲ್ಲಿ ಮತ್ತು ಇನ್ನುಳಿದನ್ನು ಬೇರೆ ಕಡೆ ಇಟ್ಟಿದ್ದರು. ಜಮೀನಿನಲ್ಲಿ ಇಟ್ಟಿದ್ದ 1500 ಎಲ್ಲಾ ಸಸಿಗಳು ಒಣಗಿ ಹೋಗಿವೆ. ಯಾರೋ ದುಷ್ಕರ್ಮಿಗಳು ಅಸೂಯೆಯಿಂದ ಕಳೆನಾಶಕ ಸಿಂಪಡಿಸಿ ಸಸಿಗಳನ್ನು ನಾಶಪಡಿಸಿದ್ದಾರೆ ಎಂದು ರೈತರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದರಿಂದ ರೈತ ಪರಮೇಶ್ವರಪ್ಪಗೆ 50 ಸಾವಿರ ನಷ್ಟ ಉಂಟಾಗಿದೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *