ದಾವಣಗೆರೆ: ಆಗಸ್ಟ್ 7 ರಂದು ಮಧ್ಯಾಹ್ನ 3 ಗಂಟೆಗೆ ಅಬಕಾರಿ ಉಪ ಆಯುಕ್ತರಾದ ಆರ್.ಎಸ್ ಸ್ವಪ್ನ ಮತ್ತು ಅಬಕಾರಿ ಉಪ ಅಧೀಕ್ಷಕರಾದ ರವಿ.ಎಂ ಮರಿಗೌಡರ್ ಸಮ್ಮುಖದಲ್ಲಿ ಅವಧಿ ಮೀರಿದ 2,23,000 ರೂ. ಮೌಲ್ಯದ ಮದ್ಯ ದಾಸ್ತನನ್ನು ನಾಶಪಡಿಸಲಾಗಿದೆ.
ನಗರದ ಕೆ.ಎಸ್.ಬಿ.ಸಿ.ಎಲ್ನ ವ್ಯವಸ್ಥಾಪಕ ಕೆ.ಸೋಮಶೇಖರ್ ನೇತೃತ್ವದಲ್ಲಿ ಡಿಪೋದಲ್ಲಿ ಮಾರಾಟವಾಗದೇ ಬಾಕಿ ಉಳಿದಿರುವ/ಅವಧಿ ಮೀರಿದ ಮಾನವನ ಸೇವನೆಗೆ ಯೋಗ್ಯವಲ್ಲದ ವಿವಿಧ ಮಾದರಿಯ ಹಾಗೂ ವಿವಿಧ ಪ್ರಮಾಣದ 78 ಪೆಟ್ಟಿಗೆ 23 ಬಾಟಲ್(521.125 ಲೀಟರ್) ಲ್ಯಾಬ್ ಹಾಗೂ 7.260 ಲೀಟರ್ ಬಿಯರ್ ದಾಸ್ತನನ್ನು ನಿಯಾಮನುಸಾರ ನಿಗಮದ ಆವರಣದಲ್ಲಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ನಾಶಪಡಿಸಲಾಗಿದೆ. ಈ ನಾಶಪಡಿಸಲಾದ ಲ್ಯಾಬ್ ಮತ್ತು ಬಿಯರ್ ದಾಸ್ತಾನಿನ ಅಂದಾಜು ಮೌಲ್ಯ ರೂ.2,23,000/-ಗಳಾಗಿರುತ್ತದೆ.



