Connect with us

Dvgsuddi Kannada | online news portal | Kannada news online

ದಾವಣಗೆರೆ: ಪೀಕ್ ಅವರ್ ನಲ್ಲಿ ಲಾರಿಗಳು ನಗರ ಪ್ರವೇಶಕ್ಕೆ ನಿರ್ಬಂಧ; ಎಸ್ ಪಿ ಅರುಣ್ ಕೆ ಆದೇಶ

ದಾವಣಗೆರೆ

ದಾವಣಗೆರೆ: ಪೀಕ್ ಅವರ್ ನಲ್ಲಿ ಲಾರಿಗಳು ನಗರ ಪ್ರವೇಶಕ್ಕೆ ನಿರ್ಬಂಧ; ಎಸ್ ಪಿ ಅರುಣ್ ಕೆ ಆದೇಶ

ದಾವಣಗೆರೆ: ಲಾರಿಗಳಿಗೆ ಪೀಕ್ ಅವರ್ ನಲ್ಲಿ ದಾವಣಗೆರೆ‌ ನಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಎಸ್ ಪಿ.‌ಅರುಣ್ ಕೆ ತಿಳಿಸಿದ್ದಾರೆ.

ಬೆಳಿಗ್ಗೆ 9 ರಿಂದ 11 ರವರೆಗೆ ಮತ್ತು ಸಂಜೆ 4 ರಿಂದ 6 ರವರೆಗೆ ಲಾರಿಗಳು ನಗರ ಪ್ರವೇಶಕ್ಕೆ ಅವಕಾಶವಿಲ್ಲ. ಈ ಪೀಕ್ ಅವರ್ಸ್‌ಗಳಲ್ಲಿ ಅಗತ್ಯ ವಸ್ತು ಪೂರೈಕೆಯ ಗ್ಯಾಸ್, ಪೆಟ್ರೋಲ್ ಮತ್ತು ಡಿಸಿಯಿಂದ ವಿಶೇಷ ಅನುಮತಿ ಪಡೆದ ಲಾರಿಗಳನ್ನು ಮಾತ್ರ ನಗರ ಪ್ರವೇಶಕ್ಕೆ ಅನುಮತಿ ನೀಡಲಾಗುವುದು.

ಪೀಕ್ ಅವರ್ ನಲ್ಲಿ ಲಾರಿ ನಿಲುಗಡೆ ಪಾಯಿಂಟ್‌ಗಳು; ಉತ್ತರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ1) ಬಾಡ ಕ್ರಾಸ್ 2)ಜಿಎಂಐಟಿ ಕಾಲೇಜು 3) ಮಾಗನಹಳ್ಳಿ ರಸ್ತೆ. ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ 1) ಶಾಮನೂರು ಅಂಡರ್ ಪಾಸ್ 2) ಲೋಕಿಕೆರೆ ಕ್ರಾಸ್ 3) ಡಿಸಿಎಂ ಅಂಡರ್ ಪಾಸ್ ಆಗಿದೆ ಎಂದು ತಿಳಿಸಿದ್ದಾರೆ.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top