ದಾವಣಗೆರೆ: ಸಂಚಾರ ನಿಯಮ ಉಲ್ಲಂಘಿಸಿ ದಂಡ ಕಟ್ಟದೇ ಬಾಕಿ ಉಳಿಸಿಕೊಂಡವರಿಗೆ ಸರ್ಕಾರ ಶೇ. 50ರಷ್ಟು ರಿಯಾಯಿತಿ ಘೋಷಣೆ ಮಾಡಿದೆ. ಈ ಯೋಜನೆಯಡಿ ಜಿಲ್ಲೆಯಲ್ಲಿ ಕಳೆದ ಮೂರು ದಿನದಲ್ಲಿ 822 ಪ್ರಕರಣಗಳಿಂದ 2.50 ಲಕ್ಷ ದಂಡ ಸಂಗ್ರಹವಾಗಿದೆ.
ಫೆ.11ರೊಳಗೆ ಬಾಕಿ ದಂಡ ಪಾವತಿಸಿದ್ರೆ ಶೇ.11 ರಷ್ಟು ರಿಯಾಯಿತಿ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಈ ಹಿಲ್ಲೆಯಲ್ಲಿ ಜಿಲ್ಲೆಯಲ್ಲಿ ಕಳೆದ ಮೂರು ದಿನದಲ್ಲಿ 822 ಪ್ರಕರಣಗಳಿಂದ 2.50 ಲಕ್ಷ ದಂಡ ವಸೂಲಿಯಾಗಿದೆ. ಮೊದಲ 255 ಪ್ರಕರಣ , ಎರಡನೇ ದಿನ 219 ಹಾಗೂ ಮೂರನೇ ದಿನ ಭಾನುವಾರ 350 ಪ್ರಕರಣಗಳಿಂದ ಒಟ್ಟು 2.50 ಲಕ್ಷ ಸಂಗ್ರವಗಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಫೆ.11 ವರೆಗೆ ಕಾಲಾವಕಾಶ ಇದ್ದು, ಸಾರ್ವಜನಿಕರು ಬಾಕಿ ದಂಡ ಪಾವತಿಸಬಹುದಾಗಿದೆ.



