ದಾವಣಗೆರೆ: ಮನೆಯಲ್ಲಿ ಕಳ್ಳತನ ಮಾಡಿದ ಆರೋಪಿಯನ್ನು ಜಿಲ್ಲಾ ಪೊಲೀಸರು ಬಂಧಿಸಿ, 1.92 ಲಕ್ಷಮೌಲ್ಯದ 47 ಗ್ರಾಂ ಚಿನ್ನಾಭರಣ, 1.50 ಲಕ್ಷ ನಗದು ಸೇರಿದಂತೆ ಒಟ್ಟು 3.42 ಲಕ್ಷ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದೆ.
ಹರಿಹರದ ಶಿವು ಅಲಿಯಾಸ್ ಶಿವಕುಮಾರ ರೆಡ್ಡಿ (24) ಬಂಧಿತ ಆರೋಪಿ. ಹದಡಿ ಪೊಲೀಸ್ ಠಾಣೆ ವ್ಯಾಪ್ತಿಯ ಜರೇಕಟ್ಟೆ ಗ್ರಾಮದ ಎಸ್.ಟಿ.ಹಾಲೇಶ ಎಂಬವರ ಮನೆಯಲ್ಲಿ ಫೆ.26ರಂದು ರಾತ್ರಿ 1.92 ಲಕ್ಷ ಮೌಲ್ಯದ 47 ಗ್ರಾಂ ಚಿನ್ನಾಭರಣ, ಕ1.50 ಲಕ್ಷ ನಗದು ಕಳುವಾದ ಬಗ್ಗೆ ಪ್ರಕರಣ ದಾಖಲಾಗಿತ್ತು.
ಮಾಯಕೊಂಡ ಸಿಪಿಐ ರಾಘವೇಂದ್ರ ನೇತೃತ್ವದಲ್ಲಿ ಪಿಎಸ್ಐ ಶ್ರೀಶೈಲ ಪಟ್ಟಣಶೆಟ್ಟಿ, ಸಿಬ್ಬಂದಿ ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ, ಫೆ.28ರಂದು ಹರಿಹರದ ಆರೋಪಿ ಶಿವು ಅಲಿಯಾಸ್ ಶಿವಕುಮಾರ ರೆಡ್ಡಿ(24)ಯನ್ನು ಬಂಧಿಸಿದರು. ಬಂಧಿತನಿಂದ ಚಿನ್ನಾಭರಣ, ನಗದು ಇತರೆ ಸ್ವತ್ತು ಜಪ್ತಿ ಮಾಡಲಾಯಿತು.
ದಾವಣಗೆರೆ: ನಿಮಗೆ ಗನ್ ತರಬೇತಿ ಪಡೆಯುವ ಆಸಕ್ತಿ ಇದ್ಯಾ..? ಜಿಲ್ಲಾ ಪೊಲೀಸ್ ವತಿಯಿಂದ ಅರ್ಜಿ ಆಹ್ವಾನ
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ಡಾ. ಎಚ್.ಟಿ. ಶೇಖರ್ ಶ್ಲಾಘಿಸಿದ್ದಾರೆ.



