ದಾವಣಗೆರೆ: ಆನ್ಲೈನ್ ಗೇಮ್ ಚಟಕ್ಕೆ ಬಿದ್ದು ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದ 23 ವರ್ಷದ ಯುವಕ ಒಂಟಿ ವೃದ್ಧೆ ಕೊಲೆ ಮಾಡಿ 8.44 ಲಕ್ಷ ಮೌಲ್ಯ ಆಭರಣಗಳನ್ನು ದೋಚಿದ್ದ ಪರಾರಿಯಾಗಿದ್ದನು. ಇದೀಗ ಜಿಲ್ಲಾ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಯಿಂದ ಸುಮಾರು 8,44,000/-ರೂ ಮೌಲ್ಯದ ಸ್ವತ್ತು ವಶಕ್ಕೆ ಪಡೆದಿದ್ದಾರೆ.
ದಾವಣಗೆರೆ ದಕ್ಷಿಣ ಉಪ ಚುನಾವಣೆ; ಮುಸ್ಲಿಂ ಸಮುದಾಯಕ್ಕೆ ಟಿಕೆಟ್; ಸಂಸದರು ಹೇಳಿದ್ದೇನು..?
ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯ ಆರುಂಡಿ ಗ್ರಾಮದಲ್ಲಿ ಫೆ.02 ರಂದುಒಂಟಿಯಾಗಿ ವಾಸಿಸುತ್ತಿದ್ದ ಕಮಲಮ್ಮ (64) ರಾತ್ರಿ ವೇಳೆ ಯಾರೋ ದುಷ್ಕರ್ಮಿಗಳು ಕೊಲೆಮಾಡಿ ಅವರ ಮೈಮೇಲಿದ್ದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದಾವಣಗೆರೆ: ಮನೆ ಬೀಗ ಮುರಿದು 30 ಲಕ್ಷ ಮೌಲ್ಯದ ಸ್ವತ್ತು ಕಳ್ಳತನ; 72 ಗಂಟೆಯೊಳಗೆ ಹಗಲು ದರೋಡೆ ಆರೋಪಿ ಬಂಧನ
ಈ ಪ್ರಕರಣದ ಆರೋಪಿತರ ಪತ್ತೆಗಾಗಿ ಎಸ್ಪಿ ಶೇಖರ್ ಹೆಚ್.ಟಿ. ಹಾಗೂ ಎಎಸ್ಪಿ ಪರಮೇಶ್ವರ ಹೆಗಡೆ, ಡಿವೈಎಸ್ಪಿ ರುದ್ರಪ್ಪ ಎಸ್ ಉಜ್ಜನಕೊಪ್ಪ, ಮಾರ್ಗದರ್ಶನದಲ್ಲಿ ಸದರಿ ಪ್ರಕರಣದ ಆರೋಪಿತರ ಪತ್ತೆ ಕಾರ್ಯಕ್ಕೆ ನ್ಯಾಮತಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರವಿ ಎನ್.ಎಸ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡ ರಚಿಸಲಾಗಿತ್ತು.
ದಾವಣಗೆರೆ: 176 ಚೀಲ ಪಡಿತರ ಅಕ್ಕಿ ವಶ
ತನಿಖಾ ಕಾಲದಲ್ಲಿ ಬಾತ್ಮಿದಾರರಿಂದ ಗ್ರಾಮದಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದವರ ಬಗ್ಗೆ ಮಾಹಿತಿ ಕಲೆಹಾಕಿ ಹಾಗೂ ಪೂರಕವಾಗಿ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದು, ಇವುಗಳ ಆಧಾರದ ಮೇಲೆ ಪ್ರಕರಣದ ಆರೋಪಿತ ಅಭಿಷೇಕ್ ಕೆ (23) ವಾಸ:- ಕಾಳೇನಹಳ್ಳಿ ಗ್ರಾಮ, ಶಿಕಾರಿಪುರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ. ಈತನನ್ನು ದಸ್ತಗಿರಿ ಮಡಿದ್ದು, ಸದರಿ ಆರೋಪಿತನ ವಿಚಾರಣಾ ಸಮಯದಲ್ಲಿ ಈತನು 2022 ನೇ ಇಸವಿಯಿಂದಲೂ ಆನ್ಲೈನ್ ಗೇಮ್ ಆಡುತ್ತಾ, ಸಾಕಷ್ಟು ಸಾಲ ಮಾಡಿಕೊಂಡಿದ್ದು ಸಾಲಗಾರರ ಕಾಟದಿಂದ 5-6 ತಿಂಗಳಿನಿಂದ ಊರನ್ನು ಬಿಟ್ಟು ಅಲ್ಲಿ-ಇಲ್ಲಿ ತಿರುಗಾಡುತ್ತಾ ಜೀವನ ಮಾಡುತ್ತಿರುತ್ತಾನೆ.
ದಿನಾಂಕ:-02/02/2026 ರಂದು ಬಸ್ನಲ್ಲಿ ಶಿವಮೊಗ್ಗದಿಂದ ಹೊನ್ನಾಳಿಗೆ ಬಂದು ತಿರುಗಾಡಿ ಬೈಕ್ ಗಳಿಗೆ ಕೈ ಮಾಡಿಕೊಂಡು ಆರುಂಡಿ ಸರ್ಕಲ್ಗೆ ಬಂದು, ಆರುಂಡಿಯಲ್ಲಿ ದೇವರ ಕಾರ್ಯಕ್ರಮವಿರುವುದು ಗೊತ್ತಾಗಿ ಆರುಂಡಿಗೆ ಬಂದು, ಗ್ರಾಮದಲ್ಲಿ ನಡೆಯುತ್ತಿದ್ದ ದೇವರ ಪಲ್ಲಕ್ಕಿಯ ಜೊತೆಗೆ ಹೋಗುವಾಗ ಪಲ್ಲಕ್ಕಿಯು ಕಮಲಮ್ಮ ರವರ ಮನೆಯ ಮುಂದೆ ಹೋಗುತ್ತಿದ್ದಾಗ ಅವರನ್ನು ನೋಡಿ ಹೊಂಚುಹಾಕಿ, ಸದರಿ ಮೃತಳ ಮನೆಯ ಹಿಂದಿನ ಬಾಗಿಲಿನಿಂದ ಮನೆಯೊಳಗೆ ಹೋಗಿ ಅವಿತು ಕುಳಿತು ಕಮಲಮ್ಮ ಮಲಗಿದ ಮೇಲೆ ಕತ್ತು ಹಿಸುಕಿ ಕೊಲೆ ಮಾಡಿ ನಂತರ ಮೃತಳ ಮೈಮೇಲೆ ಇದ್ದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ತಿಳಿದು ಬಂದಿರುತ್ತದೆ. ಸದರಿ ಆರೋಪಿತನು ಶಿಕಾರಿಪುರ ಟೌನ್ ನಲ್ಲಿ ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಒತ್ತೆ ಇಟ್ಟಿದ್ದ ಅಂದಾಜು ಬೆಲೆ 8,44,000/- ರೂ ಮೌಲ್ಯದ ಎರಡು ಎಳೆಯ ಚಿನ್ನದ ಸರ ಹಾಗೂ ಎರಡು ಚಿನ್ನದ ಬಳೆ ಮತ್ತು ಎರಡು ಕಿವಿ ಓಲೆಗಳನ್ನು ಅಮಾನತುಪಡಿಸಿಕೊಂಡಿದ್ದು ಇವುಗಳ ಒಟ್ಟು ತೂಕ 67.1 ಗ್ರಾಂ ಆಗಿರುತ್ತದೆ.
ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ. ಈ ಗಂಭೀರ ಪ್ರಕರಣದಲ್ಲಿನ ಆರೋಪಿತನ ಪತ್ತೆ ಹಾಗೂ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಅಧಿಕಾರಿಗಳಾದ ನ್ಯಾಮತಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರವಿ ಎನ್.ಎಸ್., ಪಿಎಸ್ಐ ಹೊಳಬಸಪ್ಪ ಹೋಳಿ ಮತ್ತು ಸಿಬ್ಬಂದಿಗಳಾದ ಶಿವರಾಜ್, ಆನಂದ, ಸುನೀಲ್ ಕುಮಾರ್, ಮುರುಳಿ, ನಾಗರಾಜನಾಯ್ಕ. ಮಲ್ಲೇಶಪ್ಪ, ದೇವರಾಜ್, ಪಂಪನಾಯ್ಕ, ರಾಮಪ್ಪ, ಮಹೇಶನಾಯ್ಕ, ಚನ್ನೇಶ, ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಯಾದ ರಮೇಶ್ ಇವರನ್ನು ಶೇಖರ್ ಹೆಚ್.ಟಿ ಹಾಗೂ ಎಎಸ್ಪಿ ಪರಮೇಶ್ವರ ಹೆಗಡೆ ರವರು ಶ್ಲಾಘಿಸಿದ್ದಾರೆ.



